ಮೊಳಕಾಲ್ಮೂರು: ಬದು ಮತ್ತು ಕೃಷಿ ಹೊಂಡ ನಿರ್ಮಾಣ ಯೋಜನೆ ಅನುಷ್ಠಾನದಲ್ಲಿ ಉತ್ತಮ ಸಾಧನೆ ತೋರಿದ ಮೊಳಕಾಲ್ಮೂರಿನ ತಾಪಂ ಇಒ ಪ್ರಕಾಶ್ ಹಾಗೂ ಕೋನಸಾಗರ ಪಿಡಿಒ ಪಿ.ಎಂ.ದೇವೇಂದ್ರಪ್ಪ ಅವರನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಚಿತ್ರದುರ್ಗದಲ್ಲಿ ಶುಕ್ರವಾರ ಗೌರವಿಸಿದರು.
ಬದು, ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಪ್ರತಿ ರೈತರಿಗೆ ತಲಾ 35 ಸಾವಿರ ರೂ. ಸಹಾಯಧನ ನೀಡಲಾಗಿತ್ತು. ತಾಲೂಕಿನ 816 ರೈತರು ಬದು ಹಾಗೂ 315 ಮಂದಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.