More

    VIDEO | ಮೊಬೈಲ್​ ಕಳ್ಳರನ್ನು ಬೆನ್ನಟ್ಟಿ ಹಿಡಿದ ನಾಗರಿಕರು

    ಬೆಂಗಳೂರು: ಮೊಬೈಲ್​ ಕದಿಯುತ್ತಿದ್ದ ಮೂವರನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಚಂದ್ರಾ ಲೇಔಟ್‌ನ ಸೈಯದ್ ನದೀಮ್(23), ಚೋಳರಪಾಳ್ಯದ ಇರ್ಫಾನ್​ ಪಾಷಾ (20) ಮತ್ತು ಪಾದರಾಯನಪುರದ ಮೌಷಕ್ ಅಹಮ್ಮದ್ (44) ಬಂಧಿತರು.

    ಸೋಮವಾರ ಬೆಳಗ್ಗೆ ಅಂಗವಿಕಲನ ಮೊಬೈಲ್​ ಕಸಿದು ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಮೂವರನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಇದನ್ನೂ ಓದಿ VIDEO |ಖ್ಯಾತ ಉದ್ಯಮಿ ಆನಂದ್​ ಮಹೀಂದ್ರಾ ಅವರನ್ನು ಪ್ರಭಾವಗೊಳಿಸಿದ ಈ ವಿಡಿಯೋ ಯಾವುದು?

    ಇದಕ್ಕೂ ಮೊದಲು ಇವರು ಸಿದ್ದಾಪುರ, ಕನಕಪುರ ರಸ್ತೆ ಹಾಗೂ ಬನಶಂಕರಿಯಲ್ಲಿ ಮೂರು ಮೊಬೈಲ್​ ಕಳವು ಮಾಡಿದ್ದರು.

    ಮೊಬೈಲ್​ನಲ್ಲಿ ಮಾತನಾಡಿಕೊಂಡು ದಾರಿಯಲ್ಲಿ ನಡೆದು ಹೋಗುತ್ತಿರುವವರನ್ನು ಟಾರ್ಗೆಟ್​ ಮಾಡಿ ಕಳವು ಮಾಡುತ್ತಿದ್ದರು.

    ಸಿದ್ದಾಪುರ ಪೊಲೀಸರು ಕೇಸು ದಾಖಲಿಸಿದ್ದಾರೆ. ಆರೋಪಿಗಳು ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.

    ಕನಕಪುರದಲ್ಲಿ ಸ್ಫೋಟಕ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts