More

    ಶಾಸಕ ಜಮೀರ್​ ಅಹಮದ್​ರಿಂದ ಎಂಜಲು ಸೇವನೆ; ತಿನ್ನಲು ಕಾರಣವಿದು..

    ಬೆಂಗಳೂರು: ಇತ್ತೀಚೆಗೆ ಆಗಾಗ ಏನಾದರೊಂದು ಕಾರಣಕ್ಕೆ ಸುದ್ದಿಯಾಗಿ ಗಮನ ಸೆಳೆಯುತ್ತಿರುವ ಶಾಸಕ ಜಮೀರ್ ಅಹಮದ್ ಖಾನ್ ಇದೀಗ ಮತ್ತೊಂದು ಕಾರಣಕ್ಕೆ ಜನರು ತಮ್ಮ ಕುರಿತು ಮಾತನಾಡುವಂತೆ ಮಾಡಿದ್ದಾರೆ. ಅಷ್ಟಕ್ಕೂ ಅವರು ಈ ಸಲ ಗಮನ ಸೆಳೆಯಲು ಕಾರಣ ಎಂಜಲು ತಿಂದಿದ್ದು.

    ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಖಾನ್ ಕಾರ್ಯಕ್ರಮವೊಂದರಲ್ಲಿ ದಲಿತ ಸ್ವಾಮೀಜಿಯೊಬ್ಬರ ಎಂಜಲನ್ನು ತಿಂದಿದ್ದಾರೆ. ಈ ಕುರಿತು ವಿಡಿಯೋ ವೈರಲ್ ಆಗಿದ್ದು, ಅವರು ತಾವು ಎಂಜಲು ಸೇವಿಸಿದ್ದು ಯಾಕೆ ಎಂಬುದನ್ನು ಸಮರ್ಥಿಸಿಕೊಂಡಿದ್ದಾರೆ.

    ಉತ್ತರ ಪ್ರದೇಶದಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ ಅಡುಗೆಯವ ದಲಿತ ಎಂಬ ಕಾರಣಕ್ಕೆ ಅಲ್ಲಿನ ಮಕ್ಕಳಲ್ಲಿ ಜಾತಿಭೇದ ಬಿತ್ತಲಾಗಿದ್ದು, ಆ ಮಕ್ಕಳು ಪ್ರತಿಭಟನೆ ಮಾಡಿ ಆ ಊಟವನ್ನು ತಿರಸ್ಕರಿಸಿದ್ದರು. ಮಾಧ್ಯಮದಲ್ಲಿ ಈ ವಿಚಾರ ಬಿತ್ತರವಾಗಿದ್ದನ್ನು ನೋಡಿದ್ದೆ. ಅದನ್ನು ನೋಡಿ ನನಗೆ ತುಂಬ ಬೇಸರವಾಯಿತು. ಹೀಗಾಗಿ ಇಂದು ದಲಿತ ಸ್ವಾಮೀಜಿ ನಾಗರಾಜ ಅವರಿಗೆ ಒಂದು ತುತ್ತು ತಿನ್ನಿಸಿ, ಬಳಿಕ ಅದನ್ನೇ ಅವರಿಂದ ನನಗೆ ತಿನ್ನಿಸಲು ಹೇಳಿದ್ದೇನೆ ಎಂದು ಜಮೀರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಕಾರು-ಬೈಕ್ ಭೀಕರ ಅಪಘಾತ; ಅಪ್ಪಳಿಸಿದ ಹೊಡೆತಕ್ಕೆ ಕಾರಿನ ಟಾಪ್​ಗೆ ನೆಗೆದುಬಿದ್ದ ಶವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts