ಭೋಪಾಲ್: ಭಾರತದಲ್ಲಿ ನಮೀಬಿಯಾದಿಂದ ತಂದ ಚೀತಾಗಳನ್ನು ಮರುಪರಿಚಯಿಸುವ ಯೋಜನೆಯ ಪ್ರಗತಿ ಪರಿಶೀಲನೆ ಹಾಗೂ ಮೇಲ್ವಿಚಾರಣೆಗಾಗಿ ಕೇಂದ್ರ ಸರ್ಕಾರ 11 ಸದಸ್ಯರ ಉನ್ನತ ಮಟ್ಟದ ಸಮಿ ಒಂದನ್ನು ರಚಿಸಿದೆ.
ಗ್ಲೋಬಲ್ ಟೈಗರ್ ಫೋರಂನ ಪ್ರಧಾನ ಕಾರ್ಯದರ್ಶಿ ರಾಜೇಶ್ ಗೋಪಾಲ್ ನೇತೃತ್ವವನ್ನು ವಹಿಸಿದ್ದಾರೆ. ಗುರುವಾರ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಚೀತಾ ಮರಿಗಳು ಮೃತಪಟ್ಟ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿದೆ.
ಅಧಿಕಾರಿಗಳ ಮೇಲೆ ಹಲ್ಲೆ
ಇದರ ಭಾಗವಾಗಿ ಚಿರೆತ ಟ್ರ್ಯಾಕಿಂಗ್ ಮಾಡುತ್ತಿದ್ದ ತಂಡದ ಮೇಲೆ ಶಿವಪುರಿ ಜಿಲ್ಲೆಯಲ್ಲಿ ಗ್ರಾಮಸ್ಥರು ದಾಳಿ ಮಾಡಿದ್ದು ಅಧಿಕಾರಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.
ಪೋಹಾರಿ ಪ್ರದೇಶದ ಬುರಖೇಡಾ ಗ್ರಾಮದ ಬಳಿ ನಾಲ್ವರು ಸದಸ್ಯರ ಅಧಿಕಾರಿಗಳ ತಂಡವು ಆಶಾ ಹೆಸರಿನ ಚಿರತೆಯೂ ಸಂರಕ್ಷಿತ ಪ್ರದೇಶದಿಂದ ಕಾಡನ್ನು ಪ್ರವೇಶಿಸಿರುವುದನ್ನು ಗಮನಿಸಿದ್ದಾರೆ. ಬೆಳಗಿನ ಜಾವ ಆಗಿದ್ದರಿಂದ ಕತ್ತಲಿನಲ್ಲಿ ನಿಂತು ಮಾತನಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: IPL ಕ್ವಾಲಿಫೈಯರ್2-ಫಿನಾಲೆ ಟಿಕೆಟ್ಗಾಗಿ ಮುಗಿಬಿದ್ದ ಜನ; ಜೀವಕ್ಕಿಂತ ಟಿಕೆಟ್ ಮುಖ್ಯವೇ ಎಂದ ನೆಟ್ಟಿಗರು
ಡಕಾಯಿತರೆಂದು ಭಾವಿಸಿ ಹಲ್ಲೆ
ಈ ವೇಳೆ ಅಧಿಕಾರಿಗಳು ತಾವು ಚಿರತೆಯ ಜಾಡನ್ನು ಹಿಡಿದು ಬಂದಿರುವುದಾಗಿ ತಿಳಿಸಿದ್ದು ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಗ್ರಾಮಸ್ಥರು ಕರ್ತವ್ಯ ನಿರತ ಅಧಿಕಾರಿಗಳನ್ನು ಡಕಾಯಿತರೆಂದು ಭಾವಿಸಿ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಹ್ಲಲೆಗೊಳಗಾದ ಅಧಿಕಾರಿಗಳ ತಂಡ ಹಿರಿಯ ಸದಸ್ಯರಿಗೆ ಮಾಹಿತಿ ನೀಡಿದ್ದು ಕುಡಲ್ಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ಗ್ರಾಮಸ್ಥರಿಗೆ ವಿಚಾರವನ್ನು ಮನವರಿಕೆ ಮಾಡಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.