ತುಮಕೂರು: ಜಿಲ್ಲಾ ಕೇಂದ್ರದಲ್ಲಿ ಇಂದು(ಶುಕ್ರವಾರ) ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಮತ್ತು ಕುಣಿಗಲ್ ಶಾಸಕ ಡಾ.ರಂಗನಾಥ್ ನಡುವಿನ ವಾಕ್ಸಮರ ಮಿತಿಮೀರಿತ್ತು. ಏರುಧ್ವನಿಯಲ್ಲೇ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಇಡೀ ಸಭಾಂಗಣ ಮೂಕಪ್ರೇಕ್ಷಕವಾಗಿತ್ತು.
ಕ್ಷೇತ್ರದ ಬಡ ಜನರಿಗೆ ಮನೆ ಕಟ್ಟಲು ಹಣ ಬಿಡುಗಡೆ ಮಾಡಿ ಎಂದ ಕುಣಿಗಲ್ ಶಾಸಕ ಡಾ.ರಂಗನಾಥ್ರನ್ನ ತರಾಟೆಗೆ ತೆಗೆದುಕೊಂಡ ಸಚಿವ ಮಾಧುಸ್ವಾಮಿ, ‘ರಂಗನಾಥ್, ಯುವರ್ ಫ್ರಾಡ್.. ಯುವರ್ ಕಮಿಟೆಡ್ ಫ್ರಾಡ್..’ ಎಂದರು.
ಇದನ್ನೂ ಓದಿರಿ ಜುಟ್ಟನಹಳ್ಳಿ ಮಾರಮ್ಮನ ಹುಂಡಿ ಹಣ ಕದ್ದ ಪೂಜಾರಿಯನ್ನು ಅಟ್ಟಾಡಿಸಿದ ಬಸವ, ದೇವರ ಹಣ ವಾಪಸ್!
ರಣಾಂಗಣವಾಯ್ತು ಕೆಡಿಪಿ ಸಭೆ: ಕೆಡಿಪಿ ಸಭೆ ಆರಂಭವಾಗುತ್ತಿದ್ದಂತೆ ‘ಎಸ್ಸಿ-ಎಸ್ಟಿ ಸೇರಿದಂತೆ ಇತರ ವರ್ಗದ ಜನ್ರಿಗೆ ಮನೆ ಕಟ್ಟಲು ಹಣ ಕೊಟ್ಟಿಲ್ಲ. ಬಡವರು ಬೀದಿಗೆ ಬಂದಿದ್ದಾರೆ. ಕರೊನಾ ಸಂಕಷ್ಟ ಕಾಲದಲ್ಲಿ ಸರ್ಕಾರದ ಬಳಿ ಹಣ ಇಲ್ಲ ಎಂದು ಒಪ್ಪಿಕೊಳ್ಳಿ.. ಸುಮ್ಮನೆ ಹಣ ಕೊಟ್ಟಿದ್ದೇವೆ ಎನ್ನಬೇಡಿ’ ಎಂದು ರಂಗನಾಥ್ ಹೇಳುತ್ತಿದ್ದಂತೆ ಗರಂ ಆದ ಮಾಧುಸ್ವಾಮಿ, ‘ಕುಣಿಗಲ್ನಲ್ಲಿ 38 ಮನೆಯನ್ನು ಫ್ರಾಡ್ ಮಾಡ್ತಿದ್ದೀರಿ, ರಂಗನಾಥ್ ಯುವರ್ ಫ್ರಾಡ್.. ಯುವರ್ ಕಮಿಟೆಡ್ ಫ್ರಾಡ್..’ ಎಂದು ನೇರವಾಗಿಯೇ ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಏರುಧ್ವನಿಯಲ್ಲೇ ಪ್ರತಿಕ್ರಿಯಿಸಿದ ಶಾಸಕರು,’ ಯುವರ್ ಓನ್ಲೀ ಗ್ರೇಟ್.. ಅಧಿಕಾರಿಗಳಿಗೆ ಹೇಳಿ ಆಕ್ಷನ್ ತಗೋಳಿ, ನಾವೇನಾದ್ರು ಮೋಸ ಮಾಡಿದ್ರೆ ಪ್ಲೀಸ್ ಟೇಕ್ ಆಕ್ಷನ್..’ ಎಂದು ಆಗ್ರಹಿಸಿದರು.
‘ನೀವು ಫ್ರಾಡ್ ಮಾಡಿದ್ರಿಂದಲೇ ರಾಜ್ಯಾದ್ಯಂತ ಎರಡು ತಿಂಗಳು ಹಣ ರಿಲೀಸ್ ಮಾಡೋದು ವಿಳಂಬ ಆಯ್ತು. ನನ್ನತ್ರ ದಾಖಲೆ ಇದೆ. ನೀವು ಮನೆಗಳನ್ನ ಫ್ರಾಡ್ ಮಾಡ್ತಿದ್ರೂ ಸರ್ಕಾರ ಹೇಗೆ ಹಣ ಕೊಡುತ್ತೆ..?’ ಎಂದು ಮಾಧುಸ್ವಾಮಿ ಜಾಡಿಸಿದರು. ‘ಅಕ್ರಮ ನಡೆದಿದ್ರೆ ಆಕ್ಷನ್ ತಗೋಳಿ.. ತನಿಖೆ ಮಾಡ್ಸಿ’ ಎಂದು ಶಾಸಕರು ಸವಾಲು ಎಸೆದರು.
ಸಚಿವ ಮಾಧುಸ್ವಾಮಿ v/s ಕುಣಿಗಲ್ ಶಾಸಕ ಡಾ.ರಂಗನಾಥ್
ಸಚಿವ ಮಾಧುಸ್ವಾಮಿ v/s ಕುಣಿಗಲ್ ಶಾಸಕ ಡಾ.ರಂಗನಾಥ್ತುಮಕೂರು ಜಿಲ್ಲೆಯ ಕೆಡಿಪಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಮತ್ತು ಕುಣಿಗಲ್ ಶಾಸಕ ಡಾ.ರಂಗನಾಥ್ ನಡುವೆ ವಾಕ್ಸಮರ ನಡೆದಿದೆ. ಕ್ಷೇತ್ರದ ಬಡ ಜನರಿಗೆ ಮನೆ ಕಟ್ಟಲು ಹಣ ಬಿಡುಗಡೆ ಮಾಡಿ ಎಂದು ಕುಣಿಗಲ್ ಶಾಸಕ ಡಾ.ರಂಗನಾಥ್ಕೇಳುತ್ತಿದ್ದಂತೆ ಗರಂ ಆದ ಸಚಿವ ಮಾಧುಸ್ವಾಮಿ, 'ರಂಗನಾಥ್, ಯುವರ್ ಫ್ರಾಡ್.. ಯುವರ್ ಕಮಿಟೆಡ್ ಫ್ರಾಡ್..' ಎಂದು ತರಾಟೆಗೆ ತೆಗೆದುಕೊಂಡರು. 'ನಾವೇನಾದ್ರು ಮೋಸ ಮಾಡಿದ್ರೆ ಪ್ಲೀಸ್ ಟೇಕ್ ಆಕ್ಷನ್… ತನಿಖೆ ಮಾಡ್ಸಿ' ಎಂದು ಶಾಸಕರು ಸವಾಲು ಎಸೆದರು. #Madhuswamy #Kunigal #Tumkur #DrRanganath
Posted by Vijayavani on Friday, August 7, 2020