More

    ಪ್ರಿಯಾಂಕ್ ಖರ್ಗೆ ಶಾಸ್ತ್ರ ಹೇಳೋರಾ? ಸಚಿವ ಬೈರತಿ ಬಸವರಾಜ ವ್ಯಂಗ್ಯ

    ದಾವಣಗೆರೆ: ಬಿಟ್​ ಕಾಯಿನ್ ಪ್ರಕರಣದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಹಾಕಿರುವ ಕಾಂಗ್ರೆಸ್​ ನಾಯಕ ಪ್ರಿಯಾಂಕ್ ಖರ್ಗೆ ಸಿಎಂ ಬದಲಾವಣೆ ಆಗುತ್ತೆ, ಮೂರನೇ ಮುಖ್ಯಮಂತ್ರಿ ಬರ್ತಾರೆ ಎಂಬ ಮಾತು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ “ಸಿಎಂ ಬಗ್ಗೆ ಭವಿಷ್ಯ ಹೇಳೋಕೆ ಪ್ರಿಯಾಂಕ್ ಖರ್ಗೆ ಶಾಸ್ತ್ರ ಹೇಳೋರಾ?” ಎಂದು ಪ್ರಶ್ನಿಸಿದ್ದಾರೆ.

    ಇಂದು ದಾವಣಗೆರೆಯಲ್ಲಿ ಮಾತನಾಡಿದ ಬಸವರಾಜ, ಸಿಎಂ ಬೊಮ್ಮಾಯಿ ಅವಧಿ ಪೂರೈಸುತ್ತಾರೆ. ಅವರ ನೇತೃತ್ವದಲ್ಲಿ 2023ರ ಚುನಾವಣೆ ಎದುರಿಸುತ್ತೇವೆ. ಇದರಲ್ಲಿ‌ ಯಾವುದೇ ಅನುಮಾನವಿಲ್ಲ ಎಂದು ಪ್ರಿಯಾಂಕ್​​ ಖರ್ಗೆಯ ಹೇಳಿಕೆಗೆ ತಿರುಗೇಟು ನೀಡಿದರು.

    ಇದನ್ನೂ ಓದಿ: ಕ್ರಿಪ್ಟೊ ಕರೆನ್ಸಿ ಒಂದು ತಪ್ಪಾದ ಕೈಯಲಿಲ್ಲ ಎಂಬುದನ್ನು ಎಲ್ಲ ರಾಷ್ಟ್ರಗಳು ಖಚಿತಪಡಿಸಬೇಕಿದೆ: ಪ್ರಧಾನಿ ಮೋದಿ

    ಬಿಟ್ ಕಾಯಿನ್ ಬಗ್ಗೆ ಕೇಳಿದಾಗ, “ನನಗೆ ಬಿಟ್ ಕಾಯಿನ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬಿಟ್ ಕಾಯಿನ್ ಅಂದ್ರೇನು ಗೊತ್ತಿಲ್ಲ. ಬ್ಯಾಂಕ್‌ಗಳ ಕರೆನ್ಸಿ ಗೊತ್ತು. ಬಿಟ್ ಅಂದ್ರೆ ಗೊತ್ತಿಲ್ಲ. ನಮ್ಮ ವ್ಯವಹಾರ ಇರೋದು ಸ್ಥಳೀಯ ಬ್ಯಾಂಕ್‌ಗಳಲ್ಲಿ” ಎಂದು ಸಚಿವ ಬಸವರಾಜ ಹೇಳಿದರು.

    ಭಾರತದ ಬಗ್ಗೆ ಅಮೆರಿಕದಲ್ಲಿ ‘ವಿಡಂಬನೆ’ ಮಾಡಿದ ಕಾಮೆಡಿಯನ್​​! ತರಾಟೆಗೆ ತೆಗೆದುಕೊಂಡ ನೆಟ್ಟಿಗರು

    ದಾಖಲೆ ಯಶಸ್ಸಿನೊಂದಿಗೆ ವಿವಾದಕ್ಕೆ ಸಿಲುಕಿದ ಜೈಭೀಮ್​! ನಟ ಸೂರ್ಯ ಮನೆಗೆ ಪೊಲೀಸ್ ಭದ್ರತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts