ವಿಜಯನಗರ: ನಿನ್ನೆ (ಮೇ. 2) ವಿಜಯನಗರದ ಹೊಸಪೇಟೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಗನ ಮಾತುಗಳನ್ನು ಕೇಳಿ ಸಚಿವ ಆನಂದ್ ಸಿಂಗ್ ಸಿಳ್ಳೆ ಹಾಕಿ ಸಂಭ್ರಮಿಸಿದರು.
ಹೊಸಪೇಟೆಯ ಪುನೀತ್ ರಾಜ್ ಕುಮಾರ್ ಮೈದಾನದಲ್ಲಿ ನಿನ್ನೆ ಬಿಜೆಪಿ ಸಮಾವೇಶ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ್ ಸಿಂಗ್ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಸಾಮಾನ್ಯ ಕಾರ್ಯಕರ್ತನಂತೆ ವೇದಿಕೆ ಮುಂಭಾಗದ ಕುರ್ಚಿಯಲ್ಲಿ ಕುಳಿತಿದ್ದ ಆನಂದ್ ಸಿಂಗ್ ಮಗನ ಮಾತುಗಳನ್ನು ಸಿಳ್ಳೆ ಹಾಕಿ ಸಂಭ್ರಮಿಸಿದೆ.
ಇದನ್ನೂ ಓದಿ: ಸೈಬರ್ ದಾಳಿಗೆ ಮನನೊಂದು ಬದುಕು ಅಂತ್ಯಗೊಳಿಸಿದ ಯುವತಿ
ಆನಂದ್ ಸಿಂಗ್ ಸಿಳ್ಳೆ ಹಾಕಿ ಸಂಭ್ರಮಿಸುತ್ತಿರುವ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂದಹಾಗೆ ಈ ಬಾರಿ ಬಿಜೆಪಿಯಿಂದ ಆನಂದ್ ಸಿಂಗ್ ಟಿಕೆಟ್ ಪಡೆದಿಲ್ಲ. ಬದಲಾಗಿ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸುವಲ್ಲಿ ಆನಂದ್ ಸಿಂಗ್ ಯಶಸ್ವಿಯಾಗಿದ್ದಾರೆ. ಮಗನ ಪರ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. (ದಿಗ್ವಿಜಯ ನ್ಯೂಸ್)
ಭಾರತದಲ್ಲಿ ಸರಾಸರಿ ವೇತನ 50 ಸಾವಿರ ರೂ.!; ಜಾಗತಿಕ ಪಟ್ಟಿಯಲ್ಲಿ 65ನೇ ಸ್ಥಾನ
ಗೌಡ್ರ ಹುಡುಗನನ್ನೇ ಹುಡುಕಿ ಕೊಡಿ… ಮದ್ವೆಯಾಗ್ತೀನಿ; ಹಸೆಮಣೆ ಏರಲು ತಯಾರಾದ್ರಾ ರಮ್ಯ?