More

    ಟೊಮ್ಯಾಟೋ ಆಯ್ತು ಈಗ ಮೊಟ್ಟೆ ಸರದಿ; ಸಾಮಗ್ರಿ ತುಂಬಿದ್ದ ಲಾರಿ ದೋಚಿದ ಖದೀಮರು

    ಲಖನೌ: ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಟೊಮ್ಯಾಟೋ ತುಂಬಿರುವ ಲಾರಿ ಕಳ್ಳತನವಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇದೀಗ ಖದೀಮರು ಮೊಟ್ಟೆ ಸಾಗಿಸುತ್ತಿದ್ದ ಕಂಟೇನರ್​ಅನ್ನು ಕದ್ದು ಪರಾರಿಯಾಗಿರುವ ಘಟನೆ ಉತ್ತರಪ್ರದೇಶದ ರಾಜಧಾನಿ ಲಖನೌನಲ್ಲಿ ನಡೆದಿದೆ.

    ಪ್ರಕರಣ ಸಂಬಂಧ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದು, ಬಂಧಿತರನ್ನು ಮೊಹಮ್ಮದ್​ ಫರಾಜ್, ಮುಮ್ತಾಜ್​, ಅಜ್ಮತ್​, ಸೂಫಿಯಾನ್​ ಹಾಗೂ ಇಷ್ತಿಯಾಕ್​ ಎಂದು ಗುರುತಿಸಲಾಗಿದೆ. ಬಂಧಿತರಿಂದ ಐದು ಲಕ್ಷ ರೂಪಾಯಿ ಮೌಲ್ಯದ ಮೊಟ್ಟೆ ಹಾಗೂ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಲಖನೌ ಉತ್ತರ ಡಿಸಿಪಿ ಕಾಸಿಮ್​ ಅಬ್ದಿ ಹರಿಯಾಣದಿಂದ ಮೊಟ್ಟೆಗಳನ್ನು ಮೋತಿಲಾಲ್​ ಮತ್ತು ಮುನ್ನಾಲಾಲ್​ ಎಂಬುವವರು ತಮ್ಮ ಲಾರಿಯಲ್ಲಿ ಸಾಗಿಸುತ್ತಿದ್ದರು. ಈ ವಿಚಾರ ತಿಳಿದು ಕಂಟೇನರ್​ ಇತೌಂಜಾ ಪ್ರದೇಶ ತಲುಪಿದಾಗ ಕಾರಿನಲ್ಲಿ ಬಂದ ಐವರು ಆರೋಪಿಗಳು ಲಾರಿಯನ್ನು ಅಡ್ಡಗಟ್ಟಿ ಮೋತಿಲಾಲ್​ ಮತ್ತು ಮುನ್ನಾಲಾಲ್​ ಅವರ ಮೇಲೆ ಕಾರಣ ಇಲ್ಲದೆ ಹಲ್ಲೆ ನಡೆಸಲು ಶುರು ಮಾಡಿದ್ದಾರೆ.

    egg theft

    ಇದನ್ನೂ ಓದಿ: VIDEO| ಉಕ್ಕಿ ಹರಿದ ಯಮುನೆ; ನೆರೆಯಿಂದ ತತ್ತರಿಸಿದ ದೆಹಲಿ

    ಇದಾದ ಬಳಿಕ ಆರೋಪಿಗಳು ಲಾರಿಯನ್ನು ಕದ್ದು ಪರಾರಿಯಾಗಿದ್ದಾರೆ. ಗಾಯಾಳುಗಳು ಈ ಸಂಬಂಧ ಹತ್ತಿರದ ಪೊಲೀಸ್​ ಠಾಣೆಗೆ ತೆರಳಿ ನಡೆದ ಘಟನೆ ಕುರಿತು ವಿವರಿಸಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಘಟನೆ ನಡೆದ ಸ್ಥಳದ ಸುತ್ತ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಬಂಧಿತರ ಪೈಕಿ ಮೊಹಮ್ಮದ್​ ಫರಾಜ್​ ಮೊಟ್ಟೆ ಅಂಗಡಿ ಮಾಲೀಕನಾಗಿದ್ದು, ಮುಮ್ತಾಜ್​ ಈತನ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಉಳಿದವರು ಈತನಿಗೆ ಕಳ್ಳತನ ಮಾಡಲು ಸಾಥ್​ ನೀಡಿದ್ದಾರೆ ಎಂದು ಲಖನೌ ಉತ್ತರ ಡಿಸಿಪಿ ಕಾಸಿಮ್​ ಅಬ್ದಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts