More

    ಕಾಂಗ್ರೆಸ್ ಚುನಾವಣಾ ಸಭೆ

    ಪೀಣ್ಯದಾಸರಹಳ್ಳಿ: ಪೀಣ್ಯ ಸಮೀಪದ ಜಾಲ ಹಳ್ಳಿ ಕ್ರಾಸ್ ಬಳಿ ಇರುವ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ. ಧನಂಜಯ ನೇತೃತ್ವದಲ್ಲಿ ಕ್ಷೇತ್ರದ ಎಲ್ಲ ಬ್ಲಾಕ್ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷರ ಜತೆ ಚುನಾವಣೆ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು.

    ಸಭೆಯ ಬಳಿಕ ಮಾತನಾಡಿದ ಕೆ. ನಾಗಭೂಷಣ್, ಈ ಕ್ಷೇತ್ರದಲ್ಲಿ ಪ್ರತಿನಿತ್ಯ 12 ಗಂಟೆ ಚುನಾವಣಾ ಪ್ರಚಾರ ಮಾಡುತ್ತಿದ್ದೇವೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಈ ಬಾರಿ ದಾಸರ ಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯನ್ನು ಗೆಲ್ಲಿಸುವ ಪ್ರಯತ್ನ ಮಾಡಲೇಬೇಕು ಎಂದು ಕರೆ ನೀಡಿದರು.

    ಕಾಂಗ್ರೆಸ್ ಮುಖಂಡರಾದ ದಾಸರಹಳ್ಳಿ ಉಸ್ತುವಾರಿ ಉದಯ್ ಶಂಕರ್, ಕೆ.ಸಿ. ಅಶೋಕ್, ಕೆ. ನಾಗಭೂಷಣ್, ಡಾ. ಮಂಜುನಾಥ್ (ಎಬಿಬಿ), ಜಯಂತಿ ಭಗವಾನ್, ವೈ.ವಿ. ಗೋವಿಂದರಾಜು, ಹನುಮಂತರಾಜು, ರಮೇಶ್ ಗೌಡ, ಸಚಿನ್, ಅಂಜಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts