More

    ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷರಿಂದ ಆತ್ಮಹತ್ಯೆ ಬೆದರಿಕೆ

    ಮೂಡಿಗೆರೆ: ಪಟ್ಟಣದ ರೈತ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಟಿಎಪಿಸಿಎಂಎಸ್ ವಾರ್ಷಿಕ ಮಹಾಸಭೆಯಲ್ಲಿ ಹಿಂದಿನ ಆಡಳಿತ ಅವಧಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಚರ್ಚೆಗೆ ಬರುತ್ತಿದ್ದಂತೆ ಹೈಡ್ರಾಮಾಗಳು ನಡೆದವು. ಹಿಂದಿನ ಮತ್ತು ಈಗಿನ ಆಡಳಿತ ಮಂಡಳಿ ನಿರ್ದೇಶಕರ ನಡುವೆ ಗದ್ದಲ ಏರ್ಪಟ್ಟು ಮಾಜಿ ಅಧ್ಯಕ್ಷ ಎಂ.ಎಂ. ಲಕ್ಷ್ಮಣ ಗೌಡ ರೈತ ಭವನದ ಭೋಜನ ಶಾಲೆ ಛಾವಣಿ ಏರಿ ಆತ್ಮಹತ್ಯೆ ಬೆದರಿಕೆ ಹಾಕಿದರು. ಈ ಅನಿರೀಕ್ಷಿತ ಬೆಳವಣಿಗೆಯಿಂದ ವಾರ್ಷಿಕ ಮಹಾಸಭೆಯನ್ನು ಮುಂದೂಡಲಾಯಿತು.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಲಕ್ಷ್ಮಣಗೌಡ ಅವರನ್ನು ಕೆಳಗೆ ಇಳಿಸಲು ನಡೆಸಿದ ಮನವೊಲಿಕೆ ಪ್ರಯತ್ನಗಳು ವಿಫಲವಾದವು. ಸ್ಥಳದಲ್ಲಿದ್ದ ವ್ಯಕ್ತಿಯೋರ್ವರು ಚಾಣಾಕ್ಷತನದಿಂದ ಭೋಜನಶಾಲೆ ಛಾವಣಿ ಹತ್ತಿ ಅವರನ್ನು ಕೆಳಗೆ ಇಳಿಸಲು ಯಶಸ್ವಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts