More

    ಹತ್ರಾಸ್​ನಲ್ಲಿ ಮಾಧ್ಯಮದವರಿಗೂ ತ್ರಾಸು.. ಪತ್ರಕರ್ತರಿಗೆ ಪ್ರವೇಶ ನಿಷೇಧ!

    ಹತ್ರಾಸ್​: ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಪ್ರಕ್ಷುಬ್ಧಗೊಂಡಿರುವ ಹತ್ರಾಸ್​ನಲ್ಲಿ ಶುಕ್ರವಾರ ಪೊಲೀಸರ ಬಿಗು ಬಂದೋಬಸ್ತ್​ ಒದಗಿಸಲಾಗಿದ್ದು, ಮಾಧ್ಯಮದವರಿಗೂ ನಿಷೇಧ ಹೇರಲಾಗಿದೆ.

    ಹತ್ರಾಸ್​ ಸಂತ್ರಸ್ತೆ ವಾಸಿಸುತ್ತಿದ್ದ ಬೂಲ್​ಗರ್ಹಿ ಗ್ರಾಮದಲ್ಲಿ ಜಿಲ್ಲಾಡಳಿತ ಈ ನಿಷೇಧ ಜಾರಿಗೊಳಿಸಿದ್ದು, ಮಾಧ್ಯಮದವರು ಸಂತ್ರಸ್ತೆಯ ಮನೆಗೆ ತೆರಳದಂತೆ ಹಾಗೂ ಆಕೆಯ ಕುಟುಂಬಸ್ಥರನ್ನು ಭೇಟಿ ಮಾಡದಂತೆ ನಿಷೇಧ ವಿಧಿಸಲಾಗಿದೆ. ಮಾತ್ರವಲ್ಲ ಸ್ಥಳೀಯರ ಓಡಾಟಕ್ಕೂ ನಿರ್ಬಂಧ ವಿಧಿಸಲಾಗಿದೆ. ಇನ್ನು ಕೆಲವಡೆ 144 ಸೆಕ್ಷನ್​ ಕೂಡ ಜಾರಿಗೊಳಿಸಲಾಗಿದೆ.

    ಗುರುವಾರ ಸಂತ್ರಸ್ತೆಯ ಮನೆಗೆ ತೆರಳಲು ಯತ್ನಿಸಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹಾಗೂ ನಾಯಕಿ ಪ್ರಿಯಾಂಕಾ ವಾಧ್ರಾ ಅವರನ್ನು ಪೊಲೀಸರು ತಡೆದಿದ್ದರು. ಇದೀಗ ಮಾಧ್ಯಮದವರಿಗೂ ನಿಷೇಧ ಹೇರಿದ್ದು ಚರ್ಚೆಗೀಡಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts