More

    Photos: ಸಿನಿಮಾ ಕಾರ್ಮಿಕರಿಗೆ ನೆರವಾದ ಶ್ರದ್ಧಾ ಶ್ರೀನಾಥ್​, ಮಯೂರ ರಾಘವೇಂದ್ರ ತಂಡ

    ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಕೊಳಗೇರಿ ಪ್ರದೇಶಗಳಿಗೆ 20 ದಿನಗಳಿಗೂ ಹೆಚ್ಚು ದಿನ ಸತತವಾಗಿ ಆಹಾರ ಪೂರೈಕೆ ಮಾಡಿತ್ತು ಆರ್​ಜೆ ಮಯೂರ ರಾಘವೇಂದ್ರ ಮತ್ತು ತಂಡ. ಅದಾದ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ದೇಣಿಗೆ ನೀಡುವಂತೆಯೂ ಕೋರಿತ್ತು. ಅದರಂತೆ, ದುಬೈ, ಕತಾರ, ನೆದರ್​ಲ್ಯಾಂಡ್​, ಲಂಡನ್​, ಬೆಂಗಳೂರು ಸೇರಿ ಎಲ್ಲ ಕಡೆಗಳಿಂದ ಹಣದ ನೆರವು ಹರಿದು ಬಂದಿತ್ತು. ಆ ಹಣವನ್ನೂ ಊಟದ ಹಂಚಿಕೆಗೆ ಬಳಸಿಕೊಂಡಿದ್ದರು. ಇದೀಗ ಸಿನಿಮಾ ಮಂದಿಯ ನೆರವಿಗೆ ಧಾವಿಸಿದ್ದಾರೆ. ಮಯೂರ ಅವರೊಂದಿಗೆ ನಟಿ ಶ್ರದ್ಧಾ ಶ್ರೀನಾಥ್​ ಸಹ ಪಾಲ್ಗೊಂಡಿದ್ದು, ಶುಕ್ರವಾರ ಕತ್ರಿಗುಪ್ಪೆ ಬಳಿ ಕ್ಯಾಮರಾ, ಮೇಕಪ್​ ಕಲಾವಿದರು, ಲೈಟಿಂಗ್​ ಟೀಮ್​ ಸೇರಿ ಹಲವು ವಿಭಾಗಗಳ ಕಾರ್ಮಿಕರಿಗೆ ದಿನಸಿ ಕಿಟ್​ ವಿತರಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts