ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಕೊಳಗೇರಿ ಪ್ರದೇಶಗಳಿಗೆ 20 ದಿನಗಳಿಗೂ ಹೆಚ್ಚು ದಿನ ಸತತವಾಗಿ ಆಹಾರ ಪೂರೈಕೆ ಮಾಡಿತ್ತು ಆರ್ಜೆ ಮಯೂರ ರಾಘವೇಂದ್ರ ಮತ್ತು ತಂಡ. ಅದಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ದೇಣಿಗೆ ನೀಡುವಂತೆಯೂ ಕೋರಿತ್ತು. ಅದರಂತೆ, ದುಬೈ, ಕತಾರ, ನೆದರ್ಲ್ಯಾಂಡ್, ಲಂಡನ್, ಬೆಂಗಳೂರು ಸೇರಿ ಎಲ್ಲ ಕಡೆಗಳಿಂದ ಹಣದ ನೆರವು ಹರಿದು ಬಂದಿತ್ತು. ಆ ಹಣವನ್ನೂ ಊಟದ ಹಂಚಿಕೆಗೆ ಬಳಸಿಕೊಂಡಿದ್ದರು. ಇದೀಗ ಸಿನಿಮಾ ಮಂದಿಯ ನೆರವಿಗೆ ಧಾವಿಸಿದ್ದಾರೆ. ಮಯೂರ ಅವರೊಂದಿಗೆ ನಟಿ ಶ್ರದ್ಧಾ ಶ್ರೀನಾಥ್ ಸಹ ಪಾಲ್ಗೊಂಡಿದ್ದು, ಶುಕ್ರವಾರ ಕತ್ರಿಗುಪ್ಪೆ ಬಳಿ ಕ್ಯಾಮರಾ, ಮೇಕಪ್ ಕಲಾವಿದರು, ಲೈಟಿಂಗ್ ಟೀಮ್ ಸೇರಿ ಹಲವು ವಿಭಾಗಗಳ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಮಾಡಿದರು.