More

    ಸಾಮೂಹಿಕ ವಿವಾಹಗಳು ಭಾಗ್ಯದ ಬೆಳಕಿದ್ದಂತೆ

    ಮಸ್ಕಿ: ಸಾಮೂಹಿಕ ವಿವಾಹಗಳು ಬಡವರಿಗೆ ಭಾಗ್ಯದ ಬೆಳಕಿದ್ದಂತೆ ಎಂದು ಉಟಕನೂರು ಅಡವಿಸಿದ್ದೇಶ್ವರ ಮಠದ ಶ್ರೀ ಮರಿಬಸವರಾಜದೇಶಿಕೇಂದ್ರ ಸ್ವಾಮೀಜಿ ಹೇಳಿದರು.

    ತಾಲೂಕಿನ ಗೌಡನಭಾವಿ ಗ್ರಾಮದಲ್ಲಿ ಶ್ರೀಕಟ್ಟೆ ಬಸವಲಿಂಗೇಶ್ವರ 30ನೇ ಜಾತ್ರಾ ಮಹೋತ್ಸವ, ಲಿಂ.ಶ್ರೀನಾಗಪ್ಪ ತಾತನವರ ಪುಣ್ಯಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಹಾಗೂ ಮಹಾದಾಸೋಹಿ ಕಲಬುರ್ಗಿ ಶರಣಬಸವೇಶ್ವರ ಪುರಾಣ ಪ್ರವಚನ ಮಹಾಮಂಗಲ ಧಾರ್ಮಿಕ ಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

    ಪವಾಡ ಪುರುಷ, ಮಹಾತ್ಮರೆನಿಕೊಂಡ ಲಿಂ.ಶ್ರೀಮರಿಬಸವಲಿಂಗ ತಾತನವರ ಪರಮಶಿಷ್ಯರಾದ ಲಿಂ.ಶ್ರೀನಾಗಪ್ಪ ತಾತನವರು, ಗುರುವಿಗೆ ತಕ್ಕ ಶಿಷ್ಯರಾಗಿ ಬಾಳಿದವರು. ಶ್ರೀಗಳ ಕೃಪಾಶಿರ್ವಾದದೊಂದಿಗೆ ಮುಕ್ತಿ ಮಾರ್ಗ ಕಂಡುಕೊಂಡು, ಸದ್ಭಕ್ತರಿಗೆ ಮಾರ್ಗದರ್ಶಕರಾಗಿ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ಸರಾಗವಾಗಲು ಶ್ರಮಿಸಿದ ಮಹನೀಯರೆಂದು ಸ್ಮರಿಸಿದರು.

    ಜಾತ್ರೆ ನಿಮಿತ್ತ ಪಲ್ಲಕ್ಕಿ ಮಹೋತ್ಸವ, ಉಚ್ಛಾಯ ಮಹೋತ್ಸವ ಇತರ ಧಾರ್ಮಿಕ ಕಾರ್ಯಕ್ರಮಗಳು ಜಗುಗಿದವು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮುಖಂಡರಾದ ನಿರುಪಾದೇಪ್ಪ, ಸಿದ್ದಯ್ಯಶಾಸ್ತ್ರಿ ಕಾರ್ಯಕ್ರಮ ಕುರಿತು ಮಾತನಾಡಿದರು. ಇರಲಕ್ ಮಠದ ಶ್ರೀ ಬಸವಪ್ರಸಾದಶರಣರು, ಲಿಂ. ಶ್ರೀನಾಗಪ್ಪ ತಾತನವರ ಶಿಷ್ಯರಾದ ಅಮರೇಶ, ಚನ್ನಪ್ಪತಾತ ಗೊರೇಬಾಳ, ತಿಪ್ಪನಟ್ಟಿ ಲಿಂಗಣ್ಣತಾತ, ಎಲೆಕೂಡ್ಲಿಗಿ ತಿಮ್ಮಣ್ಣ ತಾತ, ಅರ್ಚಕರಾದ ಚಂದ್ರಶೇಖರಸ್ವಾಮಿ, ವಿಜಯಕುಮಾರ ಸ್ವಾಮಿ, ಮಸ್ಕಿ ಚೇತನ ಪಾಟೀಲ್, ಗ್ರಾಪಂ ಅಧ್ಯಕ್ಷೆ ಹನುಮಂತೆಮ್ಮ ದೊಡ್ಡಪ್ಪ, ಪಿಡಿಒ ಲಕ್ಷ್ಮೀಕಾಂತ, ವಕೀಲ ಅಮರೇಶ, ಮಲ್ಲನಗೌಡ ಸುಂಕನೂರು, ರಮೇಶ ಕರೆಕುರಿ ಮತ್ತಿತರರು ಪಾಲ್ಗೊಂಡಿದ್ದರು.

    ಸಸಿ ವಿತರಣೆ: ಕಾರ್ಯಕ್ರಮದಲ್ಲಿ 14 ಜೋಡಿಗಳು ದಾಂಪತ್ಯ ಜೀವನಕ್ಕೆ ಅಡಿ ಇಟ್ಟವು. ಇವರಿಗೆ ಮಸ್ಕಿ ಪ್ರಕೃತಿ ಫೌಂಡೇಷನ್‌ನಿಂದ ಸಸಿ ವಿತರಿಸಲಾಯಿತು.
    ಬಳಗಾನೂರು ಪಿಎಸ್‌ಐ ಪ್ರಕಾಶರಡ್ಡಿ ಡಂಬಳ ನೇತೃತ್ವದಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts