ಮಾನ್ವಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮದ್ಯದ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್ಗೆ ಕರ್ನಾಟಕ ರೈತ ಸಂಘದ ತಾಲೂಕು ಸಮಿತಿ ಮನವಿ ಸಲ್ಲಿಸಿತು.
ಪಟ್ಟಣದ ಕೋನಾಪುರಪೇಟೆ, ಕೊರವರ ಕಟ್ಟೆ, ಜನತಾ ಕಾಲನಿ, ಚೀಕಲಪರ್ವಿಯ ಅಂಗಡಿ, ಹೋಟೆಲ್ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಮದ್ಯದಂಗಡಿಗಳ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ಪರವಾನಗಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ದೇವಪ್ಪ ಭಜಂತ್ರಿ, ಮಲ್ಲೇಶ, ಹುಲಿಗೆಪ್ಪ, ಹನುಮಂತ, ಬಸವರಾಜ ನಾಯಕ, ವೆಂಕಟೇಶ ನಾಯಕ, ಶಿವಯ್ಯ ನಾಯಕ, ಗೌರಪ್ಪ, ಮಲ್ಲಯ್ಯ, ಮೌಲಾಸಾಬ್, ಮಹೆಬೂಬ್ ಇತರರಿದ್ದರು.