ಮಾನ್ವಿ: ಪಟ್ಟಣದ ತಹಸಿಲ್ ಕಚೇರಿಯಲ್ಲಿ ಮತ್ತು ಬಸವೃತ್ತದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಶುಕ್ರವಾರ ಸರಳವಾಗಿ ಆಚರಿಸಲಾಯಿತು. ತಹಸಿಲ್ ಕಚೇರಿಯಲ್ಲಿ ತಹಸೀಲ್ದಾರ್ ಸಂತೋಷಿರಾಣಿ, ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಈ ವೇಳೆ ಕಂದಾಯ ಸಿಬ್ಬಂದಿ ಇದ್ದರು.
ಬಸವ ವೃತ್ತದಲ್ಲಿ: ಪಟ್ಟಣದ ಬಸವ ವೃತ್ತದಲ್ಲಿ ಬಸವಕೇಂದ್ರದಿಂದ ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ವೀರನಗೌಡ ವಕೀಲ ಪೋತ್ನಾಳ, ಬಸವಕೇಂದ್ರದ ಅಧ್ಯಕ್ಷ ಶರಣಬಸವ ನೀರಮಾನ್ವಿ, ಬಸವಪ್ರಭು ಪಾಟೀಲ್ ಕರಡಿಗುಡ್ಡ, ಸೋಮಶೇಖರ ಗುಮ್ಮ, ಬಸನಗೌಡ ಬೆಟ್ಟದೂರು, ಶಿವಶರಣ ಮೇದಾ, ಮಹಾಂತೇಶ ಕೊಟ್ನೆಕಲ್ ಹಾಗೂ ಇತರರಿದ್ದರು.