More

    ಉಡುಪಿಯಲ್ಲಿ ಮುಂಗಾರಿನ ಮಳೆಗೆ ಮೊದಲ ಬಲಿ…

    ಉಡುಪಿ: ಕರಾವಳಿ ಭಾಗಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಈ ಹಿನ್ನಲೆ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಿಸಲಾಗಿದ್ದು, ಮುಂಜಾಗೃತ ಕ್ರಮವಾಗಿ ಈಗಾಗಲೇ ಶಾಲೆ ಕಾಲೇಜುಗಳಿಗೆ ನಿನ್ನೆಯಿಂದ ರಜೆ ನೀಡಲಾಗಿದೆ. ಆದರೀಗ ಮಹಾಮಳೆಗೆ ಜಿಲ್ಲೆಯಲ್ಲಿ ಮೊದಲ ಬಲಿ ಪಡೆದಿದೆ. ನಿನ್ನೆ ತಡರಾತ್ರಿ ದಿವಾಕರ್ ಶೆಟ್ಟಿ ಎನ್ನುವವರು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಳೆಯ ಕಾರಣ ದುರ್ಘಟನೆ ನಡೆದಿದ್ದು ಸಾವಿಗೀಡಾಗಿದ್ದಾರೆ.

    ಈ ದುರ್ಘಟನೆ ಕುಂದಾಪುರ ತಾಲೂಕು ತೆಕ್ಕಟ್ಟೆ ಬಳಿ ನಡೆದಿದ್ದು ದಿವಾಕರ್ ಶೆಟ್ಟಿ, ರಾತ್ರಿ ಹೋಟೆಲ್ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ನಡೆದಿದೆ. ದಿವಾಕರ್ ಶೆಟ್ಟಿ, ತೆಕ್ಕಟೆಯ ಮಲ್ಯಾಡಿ ಸಮೀಪದ ಮಾರ್ಗವಾಗಿ ಮನೆಗೆ ಸ್ಕೂಟರ್​ನಲ್ಲಿ ತೆರಳುತ್ತಿದ್ದರು. ಮಳೆಯ ಕಾರಣ ಅವರು ಆಯತಪ್ಪಿದ್ದು ಕಾಲು ನೋವಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರು ಬೈಕ್ ಜತೆಗೆ ಜಾರಿ ಕೆರೆಗೆ ಉರುಳಿ ಬಿದ್ದಿದ್ದು ಸಾವಿಗೀಡಾಗಿದ್ದಾರೆ.

    ತಡರಾತ್ರಿ ಘಟನಸ್ಥಳಕ್ಕೆ ಆಗಮಿಸಿದ ಮುಳುಗುತಜ್ಞ ಈಶ್ವರಮಲ್ಪೆ ಕಾರ್ಯಾಚರಣೆ ನಡೆಸಿ ಶವವನ್ನು ಮೇಲಕ್ಕೆ ಎತ್ತಿದ್ದಾರೆ. ಸದ್ಯ ಕೋಟ ಪೊಲೀಸ್ ಠಾಣೆಯಲ್ಲಿ ಈ ಕುರಿತಾಗಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts