blank

ಮಾನ್ಪಡೆ ನಿಸ್ವಾರ್ಥ ಹೋರಾಟ ಯುವಕರಿಗೆ ಮಾದರಿ

blank

ಕಮಲಾಪುರ: ಮಾರುತಿ ಮಾನ್ಪಡೆ ಅವರು ಜೀವನದುದ್ದಕ್ಕೂ ಹಿಂದುಳಿದವರು, ಬಡವರು ಹಾಗೂ ಕಾರ್ಮಿಕ ಧ್ವನಿಯಾಗಿ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಚಿವ ರೇವುನಾಯಕ ಬೆಳಮಗಿ ಬಣ್ಣಿಸಿದರು.

ಅಂಬಲಗಾದಲ್ಲಿ ಕಾಮ್ರೇಡ್ ಮಾರುತಿ ಮಾನ್ಪಡೆ ಅವರ ಅಭಿಮಾನಿಗಳ ಸಂಘ ಹಾಗೂ ಗ್ರಾಮ ಪಂಚಾಯಿತಿ ನೌಕರರ ಸಂಘದಿAದ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಮಿಕ ನಾಯಕ ಮಾರುತಿ ಮಾನ್ಪಡೆ ಅವರ ಮೂರನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಡೀ ಜೀವನವನ್ನೇ ಹೋರಾಟಕ್ಕೆ ಮೀಸಲಿಟ್ಟಿದ್ದರು. ಮಾನ್ಪಡೆ ಅವರ ಸರಳ ವ್ಯಕ್ತಿತ್ವ ಹಾಗೂ ಹೋರಾಟ ಮನೋಭಾವ ಇಂದಿನ ಯುವಜನತೆಗೆ ಮಾದರಿ ಎಂದು ತಿಳಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಹಾಯಕ ಆಯುಕ್ತ ಸಿ.ಬಿ.ಪಾಟೀಲ್ ಓಕಳಿ ಮಾತನಾಡಿ, ಹೋರಾಟಗಾರರ ಬದುಕು ಮುಳ್ಳಿನ ಹಾಸಿಗೆಯಂತೆ. ಮಾನ್ಪಡೆ ಅದೆಷ್ಟೋ ಬಾರಿ ಪೊಲೀಸರಿಂದ ಏಟು ತಿಂದರೂ ಹಿಂಜರಿದಯದೆ ಜನತೆಗೆ ನ್ಯಾಯ ಒದಗಿಸಿಕೊಟ್ಟಿದ್ದರು ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಶರಣಬಸ್ಸಪ್ಪ ಪಾಟೀಲ್ ಅಷ್ಟಗಿ, ಜಿ¯್ಲÁ ಕಾರ್ಮಿಕ ಮುಖಂಡ ಸುನೀಲ್ ಮಾನ್ಪಡೆ, ಕಸಾಪ ತಾಲೂಕು ಅಧ್ಯP್ಷÀ ಸುರೇಶ ಲೇಂಗಟಿ ಮಾತನಾಡಿದರು. ಪ್ರಮುಖರಾದ ರೇವಪ್ಪ ಚಿಲಿ, ಕುಪೆಂದ್ರ ದಂಡಿನ್, ಬಂಡಪ್ಪ ಚಿಲಿ, ರಾಬಿಯಾ ಬೇಗಂ, ಅಂಬಾರಾಯ ಲೇಂಗಟಿ, ನಾಗಪ್ಪ ನಾಗೂರೆ, ಭೀಮಶಾ ಭಾಲ್ಕಿ, ಸಂಗಮೇಶ ಕಲಬುರಗಿ, ಬಸವರಾಜ ಸರಡಗಿ, ಅನಂತ ಪಾಟೀಲ್, ನಾಗಪ್ಪ ಛತ್ರಿ, ಮಲ್ಲಿನಾಥ ಅಂಬಲಗಿ, ಅವಿನಾಶ ಸಿಂಗೆ, ಪಂಡಿತ ಒಡೆಯರಾಜ ಇತರರಿದ್ದರು. ದಿಲೀಪ್ ಪೂಜಾರಿ ನಿರೂಪಣೆ ಮಾಡಿದರು. ಗುಂಡಪ್ಪ ಕೊಳ್ಳುರೆ ಸ್ವಾಗತಿಸಿದರು. ಸುಭಾಶಚಂದ್ರ ವಾಲಿ ವಂದಿಸಿದರು.

Share This Article

ಮನೆಯಲ್ಲೇ ಗಟ್ಟಿ ಮೊಸರು ಮಾಡುವ ವಿಧಾನ ನಿಮಗೆ ತಿಳಿದಿದೆಯೇ; ಇಲ್ಲಿದೆ ಸಿಂಪಲ್ ಟ್ರಿ​ಕ್ಸ್​​​​​ | Health Tips

ಚಳಿಗಾಲವಿರಲಿ, ಬೇಸಿಗೆಯಿರಲಿ ಮೊಸರನ್ನು ಇಷ್ಟಪಡುವವರು ಹವಾಮಾನ ಬದಲಾದಾಗಲೂ ಅದನ್ನು ತಿನ್ನುವುದನ್ನು ನಿಲ್ಲಿಸುವುದಿಲ್ಲ. ಚಳಿ ಹೆಚ್ಚಾದಾಗಲೂ ಅನೇಕರು…

ಊಟದ ಸಮಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ; ಮಾಹಿತಿ ತಿಳಿದು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದನ್ನು ತಪ್ಪಿಸಿ | Health Tips

ಮಧುಮೇಹವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. WHO ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.…

ಈ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಕುಕ್ಕರ್‌ನಲ್ಲಿ ಬೇಯಿಸಬೇಡಿ, ವಿಷಕಾರಿಯಾಗಬಹುದು ಎಚ್ಚರ! Pressure Cooker

Pressure Cooker : ಪ್ರೆಶರ್​ ಕುಕ್ಕರ್ ಇಂದು ಪ್ರತಿ ಮನೆಗಳಲ್ಲೂ ಅಗತ್ಯವಿರುವ ಅಡುಗೆ ಸಲಕರಣೆಗಳಲ್ಲಿ ಒಂದಾಗಿದೆ.…