ಮಂಡ್ಯ: ಪುನೀತ್ ರಾಜ್ಕುಮಾರ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ದಿನವೇ ಅಭಿಮಾನಿಯೊಬ್ಬ ಸಾವಿನ ಹಾದಿ ಹಿಡಿದಿರುವ ಹೃದಯವಿದ್ರಾವಕ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದಲ್ಲಿ ನಡೆದಿದೆ.
ಕಿರಣ್ (22) ಮೃತ ಅಪ್ಪು ಅಭಿಮಾನಿ. ನಿನ್ನೆ ಗ್ರಾಮದಲ್ಲಿ ನಡೆದ ಅಪ್ಪು ಸ್ಮರಣೆಯಲ್ಲಿ ಕಿರಣ್ ಪಾಲ್ಗೊಂಡಿದ್ದ. ಬಳಿಕ ಅನ್ನಸಂತರ್ಪಣೆಯನ್ನು ಕೂಡ ನಡೆಸಿದ್ದ. ಆದರೆ, ಕಾರ್ಯಕ್ರಮ ಮುಗಿದ ಬಳಿಕ ಮನೆಗೆ ಬಂದು ಕಿರಣ್ ಸಾವಿಗೆ ಶರಣಾಗಿದ್ದಾರೆ.
ನಿನ್ನೆ (ಅ. 30) ರಾತ್ರಿ 10 ಗಂಟೆ ಸಮಯದಲ್ಲಿ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಕಿರಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಕೆಆರ್ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)
ಸೌಂದರ್ಯ ಕಾಳಜಿಯೇ ಸಮಂತಾಗೆ ಮುಳುವಾಯ್ತಾ? ಮಯೋಸಿಟಿಸ್ ಕಾಯಿಲೆಗೆ ಕಾರಣ ಬಹಿರಂಗ
ಜಿಂಬಾಬ್ವೆ ವಿರುದ್ಧ ಪಾಕ್ಗೆ ಹೀನಾಯ ಸೋಲು: ವೈರಲ್ ಆಗ್ತಿದೆ 7 ವರ್ಷದ ಹಿಂದೆ ಬಾಬರ್ ಅಜಾಮ್ ಮಾಡಿದ್ದ ಟ್ವೀಟ್!
ಕರ್ತವ್ಯ ನಿರತ ಕಂದಾಯ ಇಲಾಖೆ ನೌಕರನ ಮೇಲೆ ಹಲ್ಲೆ: ವಕೀಲನ ವಿರುದ್ಧ ದೂರು ದಾಖಲು