ನವದೆಹಲಿ: ಇಪ್ಪತ್ತೆರಡು ವರ್ಷದ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದರಲ್ಲೂ ಆತ ನೇಣಿಗೆ ಕೊರಳೊಡ್ಡುವ ಮುನ್ನ ಫೇಸ್ಬುಕ್ಗೆ ವಿಡಿಯೋ ಅಪ್ಲೋಡ್ ಮಾಡಿದ್ದಾನೆ.
ನವದೆಹಲಿಯ ರೋಹಿಣಿ ಸೆಕ್ಟರ್ 11ರಲ್ಲಿ ಈ ಆತ್ಮಹತ್ಯೆ ನಡೆದಿದೆ. ತಕ್ಷಣ ಆತನನ್ನು ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಮೃತನ ತಂದೆ ತಮ್ಮ ಪುತ್ರನ ಗೆಳತಿ ಹಾಗೂ ಸ್ನೇಹಿತರಾದ ಸುಮಿತ್ ಗೋಸ್ವಾಮಿ ಹಾಗೂ ವಿಪಿನ್ ಖತ್ರಿ ಅವರೇ ಈ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.
ಆರೋಪಕ್ಕೆ ಒಳಗಾಗಿರುವ ಯುವತಿ ಮತ್ತು ಮೃತ ಯುವಕ ಇಬ್ಬರೂ ಸ್ನೇಹಿತರಾಗಿದ್ದು, 2018ರಲ್ಲಿ ಆಕೆಯ ತಂದೆ ಈತನ ಬಿಜಿನೆಸ್ಗೆ 5 ಲಕ್ಷ ರೂ. ಹೂಡಿಕೆ ಮಾಡಿದ್ದರು. ಕಾರಣಾಂತರದಿಂದ 2019ರಲ್ಲಿ ಪಾಲುದಾರಿಕೆಯಿಂದ ಹೊರಬಂದ ಯುವತಿ, ಸುಮಿತ್ ಹಾಗೂ ವಿಪಿನ್ ಜತೆ ಕೆಲಸ ಮಾಡಲಾರಂಭಿಸಿದ್ದಳು. ಇದರಿಂದ ನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದ್ದು, ತನಿಖೆ ನಡೆಯುತ್ತಿದೆ. (ಏಜೆನ್ಸೀಸ್)