ಮೊರಾದಾಬಾದ್: ಇಲ್ಲೊಬ್ಬ ಸೀದಾ ಪೆಟ್ರೋಲ್ ಬಂಕ್ಗೆ ಹೋಗಿ ಬಾಟಲಿಯಲ್ಲಿ ಪೆಟ್ರೋಲ್ ತುಂಬಿಕೊಡಿ ಎಂದು ಗಂಟು ಬಿದ್ದ. ಆದರೆ ಆ ಬಂಕ್ನ ಉದ್ಯೋಗಿ ಅದಕ್ಕೆ ಒಪ್ಪಲಿಲ್ಲ. ವಾಹನಕ್ಕೆ ಹಾಕಿಕೊಡುತ್ತೇವೆ, ಬಾಟಲಿಯಲ್ಲಿ ಕೊಡುವುದಿಲ್ಲ ಎಂದರು. ಅಷ್ಟಕ್ಕೇ ಸಿಟ್ಟಿಗೆದ್ದ ಈ ಭೂಪ ಮಾಡಬಾರದ್ದನ್ನು ಮಾಡಿ ಈಗ ಬಂಧಿತನಾಗಿದ್ದಾನೆ.
ಉತ್ತರ ಪ್ರದೇಶದ ಮೊರಾಬಾದ್ನಲ್ಲಿ ಶುಕ್ರವಾರ ಘಟನೆ ನಡೆದಿದೆ. ಬೈಕ್ನಲ್ಲಿ ಹೋದ ವ್ಯಕ್ತಿ ಬಾಟಲಿಯಲ್ಲೂ ಹೆಚ್ಚುವರಿ ಪೆಟ್ರೋಲ್ ನೀಡುವಂತೆ ಕೇಳಿದ್ದಾನೆ. ಆದರೆ ಬಂಕ್ನಲ್ಲಿ ಕೆಲಸ ಮಾಡುವವರು ಇದಕ್ಕೆ ಒಪ್ಪಲಿಲ್ಲ. ಆಗ ಸಿಟ್ಟಾದ ವ್ಯಕ್ತಿ ತಾನು ಮತ್ತೊಂದು ಪೆಟ್ರೋಲ್ ಬಂಕ್ನಿಂದ ಬಾಟಲಿಯಲ್ಲಿ ತುಂಬಿಸಿಕೊಂಡು ತಂದಿದ್ದ ಪೆಟ್ರೋಲ್ನ್ನು ಅಲ್ಲಿನ ಕೆಲಸಗಾರನ ಮೇಲೆ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ.
ಆಗ ಅಲ್ಲಿಯೇ ಇದ್ದ ಇನ್ನೊಬ್ಬಾತ ಪೆಟ್ರೋಲ್ ಪಂಪ್ನಿಂದಲೇ ವ್ಯಕ್ತಿಗೆ ಹೊಡೆದಿದ್ದಾನೆ. ಹೀಗೆ ಕ್ಷಣ ಕಾಲ ಕೈಕೈ ಮಿಲಾಯಿಸಿಕೊಂಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೊಲೆ ಪ್ರಯತ್ನ ಆರೋಪದಡಿ ಆ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಸ್ಪಿ ಅಮಿತ್ ಕುಮಾರ್ ಆನಂದ್ ತಿಳಿಸಿದ್ದಾರೆ.
ಪೆಟ್ರೋಲ್ ಬಂಕ್ಗೆ ಹೋಗಿ ಅವಾಂತರ ಸೃಷ್ಟಿಸಿ, ಅರೆಸ್ಟ್ ಆದ ಭೂಪ…
ಪೆಟ್ರೋಲ್ ಬಂಕ್ಗೆ ಹೋಗಿ ಅವಾಂತರ ಸೃಷ್ಟಿಸಿ, ಅರೆಸ್ಟ್ ಆದ ಭೂಪ…
Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಜನವರಿ 3, 2020