More

    VIDEO| 150 ರೂಪಾಯಿ ಆಸೆಗೆ 3 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ..!

    ಬೆಂಗಳೂರು: ವ್ಯಕ್ತಿಯೊಬ್ಬ 150 ರೂಪಾಯಿ ಆಸೆಗೆ 3 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಗರದ ಮಹಾಲಕ್ಷ್ಮೀ ಲೇಔಟ್​ನಲ್ಲಿ ನಡೆದಿದೆ.

    ನಗರದಲ್ಲಿ ಗಮನ ಬೇರೆಡೆ ಸೆಳೆದು ಕಳ್ಳತನ ಎಸಗುವ ಕೃತ್ಯ ನಡೆದಿದ್ದು, ಕೇವಲ 8 ಸೆಕೆಂಡ್​ನಲ್ಲಿ ಖದೀಮರು ಲಕ್ಷ..ಲಕ್ಷ ಹಣ ಎಗರರಿಸಿದ್ದಾರೆ. ಬ್ಯಾಂಕ್​ಗಳಲ್ಲಿ ಹಣ ಡ್ರಾ ಮಾಡಿಕೊಂಡು ಹೋಗುವ ಜನರು ಈ ಬಗ್ಗೆ ಎಚ್ಚರವಹಿಸಬೇಕಿದೆ.

    ಕಟ್ಟಡ ನಿರ್ಮಾಣ ಕಂಪೆನಿಯಲ್ಲಿ ಕ್ಯಾಷಿಯರ್ ಆಗಿರುವ ರಾಜಶೇಖರ್ ಹಣ ಕಳೆದುಕೊಂಡ ವ್ಯಕ್ತಿ. ಕಂಪನಿಗೆ ಹಣದ ಅವಶ್ಯಕತೆ ಹಿನ್ನೆಲೆ ಬೆಳಗ್ಗೆ ಹಣ ಡ್ರಾ ಮಾಡಿಕೊಳ್ಳಲು ರಾಜಶೇಖರ್​ ಬಂದಿದ್ದರು. ಜನತಾ ಕೋ ಆಪರೇಟಿವ್ ಬ್ಯಾಂಕ್​ನಿಂದ 3 ಲಕ್ಷ ನಗದು ಹಿಂಪಡೆದು, ಬ್ಯಾಂಕ್​ನಿಂದ ಹೊರಬಂದು, ಬೈಕ್ ಮೇಲೆ ಹಣದ ಬ್ಯಾಗ್ ಇಟ್ಟು ಜರ್ಕಿನ್ ಹಾಕಿಕೊಳ್ಳುತ್ತಿದ್ದರು.

    ಇದನ್ನೂ ಓದಿ: ಕರೊನಾ ರೋಗಿಯ ಮೇಲೆ ಆಂಬುಲೆನ್ಸ್​ ಡ್ರೈವರ್​ ಅತ್ಯಾಚಾರ: ಕರಾಳ ಘಟನೆ ಬಗ್ಗೆ ಸಂತ್ರಸ್ತೆಯ ಮೊದಲ ಪ್ರತಿಕ್ರಿಯೆ!

    ಈ ವೇಳೆ ಓರ್ವ ವ್ಯಕ್ತಿ ಬಂದು ನಿಮ್ಮ ಹಣ ಬಿದ್ದಿದೆ ಎಂದು ರಾಜಶೇಖರ್​ಗೆ ಹೇಳಿದ. ಹಣ ಎತ್ತಿಕೊಳ್ಳಲು ರಾಜಶೇಖರ್ ಹೋದಾಗ ಇತ್ತ ಮತ್ತೊಬ್ಬ ವ್ಯಕ್ತಿ ಬಂದು ಹಣವಿದ್ದ ಬ್ಯಾಗ್ ಅನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಬಳಿಕ ಬೈಕಿನ ಬಳಿ ಬಂದ ರಾಜಶೇಖರ್​ ಬ್ಯಾಗ್​ ಇಲ್ಲದಿರುವುದನ್ನು ನೋಡಿ ತಬ್ಬಿಬ್ಬಾದರು.

    ಕೇವಲ 150 ರೂಪಾಯಿ ಆಸೆಗೆ ರಾಜಶೇಖರ್​ 3 ಲಕ್ಷ ರೂ. ಕಳೆದುಕೊಂಡಿದ್ದು, ಈ ಬಗ್ಗೆ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಟೋರಿಯಸ್ ಗ್ಯಾಂಗ್ ಪತ್ತೆಗೆ ಉತ್ತರ ವಿಭಾಗ ಪೊಲೀಸರಿಂದ ವಿಶೇಷ ತಂಡಗಳ ರಚನೆಯಾಗಿದೆ. (ದಿಗ್ವಿಜಯ ನ್ಯೂಸ್​)

    ಇಲ್ಲಿದೆ ನೋಡಿ ಫೋಟೋ ಅಸಲಿಯತ್ತು! ಭಾರತ ಕಂಡ ಅತ್ಯಂತ ಕೆಟ್ಟ ರಾಜಕಾರಣಿ ಎನಿಸಿಕೊಂಡವರಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts