ಬೆಂಗಳೂರು: ಮಿತಿಮೀರಿದ ವೇಗದ ಚಾಲನೆಯನ್ನು ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಬಿ ನಗರದಲ್ಲಿ ನಡೆದಿದೆ. ಗಾಯಾಳು ವೆಂಕಟೇಶ್ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಾಳು ವೆಂಕಟೇಶ್ ಸ್ನೇಹಿತನ ಮನೆಯ ಕಾರ್ಯಕ್ರಮಕ್ಕೆ ಹೊಸಕೋಟೆಗೆ ಹೋಗಿದ್ದರು. ಈ ವೇಳೆ ಅದೇ ಮಾರ್ಗದಲ್ಲಿ ಮಿತಿಮೀರಿದ ವೇಗದಲ್ಲಿ ಆರೋಪಿ ಗೋಪಾಲಸ್ವಾಮಿ ಮಿತಿ ಮೀರಿದ ವೇಗದಲ್ಲಿ ವಾಹನ ಚಾಲನೆ ಮಾಡಿಕೊಂಡು ಬಂದಿದ್ದಾನೆ. ಇದನ್ನ ಪ್ರಶ್ನಿಸಿದಕ್ಕೆ ಕೊಡಿಗೇಹಳ್ಳಿಗೆ ಬಾ, ನಿನ್ನನ್ನು ನೋಡ್ಕೊಳ್ತೀನಿ ಎಂದು ಗೋಪಾಲಸ್ವಾಮಿ ಬೆದರಿಕೆ ಹಾಕಿದ್ದಾನೆ.
ಇದನ್ನೂ ಓದಿ: ಅಪ್ಪು ಪುತ್ಥಳಿ ಮೆರವಣಿಗೆ ವೇಳೆ ಜೆಡಿಎಸ್ ಕಾರ್ಯಕರ್ತರು – ಪೊಲೀಸರ ಮಧ್ಯೆ ವಾಗ್ವಾದ; ಪಿಎಸ್ಐ ಕಾಲರ್ ಎಳೆದು ಹಲ್ಲೆ ಮಾಡಿದ ಶಾಸಕರ ಪುತ್ರ
ನಿನ್ನೆ ಸಂಜೆ ಕೋಡಿಗೆಹಳ್ಳಿ ಮನೆಯ ಬಳಿ ಗಾಯಾಳು ವೆಂಕಟೇಶ್ ಬಂದಾಗ, ಗೋಪಾಲಸ್ವಾಮಿ ಹಾಗೂ ಆತನ ಮಕ್ಕಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಜಗಳ ಮಾಡಲು ಆರಂಭಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ವೆಂಕಟೇಶ್ ಕುತ್ತಿಗೆಗೆ ಗೋಪಾಲಸ್ವಾಮಿ ಚಾಕು ಇರಿದಿದ್ದಾನೆ.
ಪ್ರಕರಣ ಸಂಬಂಧ ಗೋಪಾಲಸ್ವಾಮಿ, ಮಕ್ಕಳಾದ ಧನುಷ್, ಚಂದ್ರಶೇಖರ್, ಶ್ರೀನಿವಾಸ್ ಸೇರಿ.9 ಜನರ ವಿರುದ್ಧ ಕೊಡಿಗೇಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.