More

    ಕ್ವಾರಂಟೈನ್​ ಕ್ಯಾಂಪ್​ ವಿಚಾರವಾಗಿ ಗ್ರಾಮಸ್ಥರ ನಡುವಿನ ಗಲಭೆಯಲ್ಲಿ ಓರ್ವ ವ್ಯಕ್ತಿಯ ಹತ್ಯೆ

    ಕೋಲ್ಕತ: ಕರೊನಾ ವೈರಸ್​ ಕ್ವಾರಂಟೈನ್​ ಶಿಬಿರ ಅಳವಡಿಸುವ ವಿಚಾರದಲ್ಲಿ ಉಂಟಾದ ಗಲಾಟೆಯಿಂದಾಗಿ 40 ವರ್ಷದ ವ್ಯಕ್ತಿಯೊಬ್ಬ ಹತ್ಯೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ಬಿರ್ಭಮ್​ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

    ಕೋಲ್ಕತದಿಂದ 180 ಕಿ.ಮೀ ದೂರವಿರುವ ಬಿರ್ಭಮ್​ ಜಿಲ್ಲೆಗೆ ಸೇರಿದ ತಲಿಬಪುರ್​ ಗ್ರಾಮದಲ್ಲಿ ಕ್ವಾರಂಟೈನ್ ಕ್ಯಾಂಪ್​ ಅಳವಡಿಸಲು ಅಧಿಕಾರಿಗಳು ಮುಂದಾಗಿದ್ದರು. ಆದರೆ, ಶಾಲೆಗೆ ಹೊಂದಿಕೊಂಡ ಹಾಸ್ಟೆಲ್​ನಲ್ಲಿ ಕ್ಯಾಂಪ್ ಅಳವಡಿಸಲು ಗ್ರಾಮದ ಒಂದು ಗುಂಪಿನ ಮಂದಿ ವಿರೋಧಿಸಿದರು. ಆದರೆ, ಮತ್ತೊಂದು ಗುಂಪು ಅಧಿಕಾರಿಗಳಿಗೆ ಬೆಂಬಲ ನೀಡಿದರು.

    ಈ ವೇಳೆ ಎರಡು ಗುಂಪಿನ ನಡುವೆ ಗಲಭೆ ಉಂಟಾಗಿದೆ. ಒಬ್ಬರಿಗೊಬ್ಬರು ಸ್ಪೋಟಕಗಳನ್ನು ಎಸೆದಾಡಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಸೈಫುಲ್​ ಶೇಖ್​ ಎಂಬುವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಮಾರ್ಗ ಮಧ್ಯೆಯೇ ಸಾವಿಗೀಡಾಗಿರುವುದಾಗಿ ವೈದ್ಯರು ತಿಳಿಸಿದರೆಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಉಲ್ಬಣಗೊಂಡಿದ್ದು, ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. (ಏಜೆನ್ಸೀಸ್​)

    ಏರ್​ ಇಂಡಿಯಾ ಪೈಲಟ್​​ಗಳನ್ನು ಹೊಗಳಿದ ಪಾಕಿಸ್ತಾನ; ನಮಗೆ ನಿಮ್ಮ ಬಗ್ಗೆ ತುಂಬ ಹೆಮ್ಮೆ ಇದೆ, ಗುಡ್​ ಲಕ್​ ಎಂದು ಹಾರೈಸಿದ ಎಟಿಸಿ

    ವಿದೇಶದಲ್ಲಿ ವ್ಯಾಸಂಗದ ಕನಸಿಗೆ ತಣ್ಣಿರೆರಚಿದ ಕರೊನಾ: ಪರೀಕ್ಷೆ ವಿಳಂಬ, ಪ್ರವೇಶ ಮರೀಚಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts