More

    ಬೀಡಿ ಜಗಳ ಕೊನೆಯಾಗಿದ್ದು ಕಾಡಿನಲ್ಲಿ: ರಾತ್ರಿ ನಡೆದದ್ದು ಮಾತ್ರ ರಹಸ್ಯ..

    ದೆಹಲಿ: ಬೀಡಿ ಕೊಡಲು ನಿರಾಕರಿಸಿದ ಕಾರ್ಮಿಕನನ್ನು ಮತ್ತೊರ್ವ ಕೊಲೆ ಮಾಡಿರುವ ಘಟನೆ ದೆಹಲಿಯ ಶಹಬಾದ್ ಡೈರಿ ಪ್ರದೇಶದಲ್ಲಿ ನಡೆದಿದೆ.

    ಇದನ್ನೂ ಓದಿ: ಬಹುದಿನಗಳಿಂದ ಕಾಯುತ್ತಿರುವ ಫೀಚರ್​ನ್ನು ಶೀಘ್ರದಲ್ಲೇ ಪರಿಚಯಿಸಲಿದೆ ವ್ಯಾಟ್ಸ್​​​ಆ್ಯಪ್​​

    ಸಂಜಯ್ ಮಿಶ್ರಾ (35) ಮೃತ ದುರ್ದೈವಿಯಾಗಿದ್ದು, ಆರೋಪಿಯನ್ನು 20 ವರ್ಷದ ಸತ್ಯವಾನ್ ಎಂದು ಗುರುತಿಸಲಾಗಿದೆ. ಕಾರ್ಪೆಂಟರ್ ಅಂಗಡಿಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದು ಇಬ್ಬರು ಶಹಬಾದ್ ಡೈರಿ ನಿವಾಸಿಗಳಾಗಿದ್ದಾರೆ.

    ಸೋಮವಾರ ರಾತ್ರಿ ಮಹಾದೇವ ಚೌಕ್ ಬಳಿಯ ಪ್ರದೇಶದ ಬಳಿ ಹೋಗುತ್ತಿದ್ದಾಗ ಮಿಶ್ರಾ ತನ್ನ ಸ್ನೇಹಿತನ ಜೊತೆಯಲ್ಲಿದ್ದನ್ನು ನೋಡಿದ ಸತ್ಯವಾನ್, ಆತನಿಗೆ​​ ಬೀಡಿ ಕೊಡಿಸುವಂತೆ ಕೇಳಿದ್ದ. ಆಗ ಮಿಶ್ರಾ ಆರೋಪಿಯನ್ನು ಗದರಿಸಿ ಕಳುಹಿಸಿದ್ದ. ಆದರೆ ನಂತರದಲ್ಲಿ ಆರೋಪಿಯು ಸಮಯವನ್ನು ನೋಡಿಕೊಂಡು ಆತನಿಗೆ ಚಾಕುವಿನಿಂದ ಇರಿದಿದ್ದಾನೆ.

    ಇದನ್ನೂ ಓದಿ: ಬಹುದಿನಗಳಿಂದ ಕಾಯುತ್ತಿರುವ ಫೀಚರ್​ನ್ನು ಶೀಘ್ರದಲ್ಲೇ ಪರಿಚಯಿಸಲಿದೆ ವ್ಯಾಟ್ಸ್​​​ಆ್ಯಪ್​​

    ಮರುದಿನ ಬೆಳಿಗ್ಗೆ 9 ಗಂಟೆಯ ಸುಮಾರಿಗೆ, ಸಂಸ್ಕೃತಿ ಅಪಾರ್ಟ್‌ಮೆಂಟ್ ಬಳಿಯ ಕಾಡಿನಲ್ಲಿ ಮೃತದೇಹವು ಇರಿತದ ಗಾಯಗಳೊಂದಿಗೆ ಬಿದ್ದಿರುವುದನ್ನು ಕಂಡ ಸಿವಿಲ್ ಡಿಫೆನ್ಸ್ ಸ್ವಯಂಸೇವಕ ಸುಮನ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿಯನ್ನು ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ವಶಕ್ಕೆ ಪಡೆದು, ಈ ಕುರಿತು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts