More

    ಕೊನೆಗೂ ಸೆರೆಯಾಯ್ತು ಕೊಡಗಿನ ನರಭಕ್ಷಕ ಹುಲಿ!

    ಕೊಡಗು: ಕೆಲವು ದಿನಗಳಿಂದ ಕೊಡಗಿನಲ್ಲಿ ನರಭಕ್ಷಕ ಹುಲಿಯ ಭಯದಲ್ಲಿ ಜನರು ಓಡಾಡುತ್ತಿದ್ದರು. ಇದೀಗ ಆ ಹುಲಿ ಸೆರೆಯಾಗಿದ್ದು ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ. ಈ ಹುಲಿ ಹಾಡಹಗಲೇ ಹದಿಹರೆಯದ ಯುವಕನ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು.

    ಇದನ್ನೂ ಓದಿ: ಹುಲಿ ದಾಳಿಗೆ ಅಧಿಕಾರಿಗಳೇ ನೇರ ಹೊಣೆ ಎಂದ ಹೈಕೋರ್ಟ್​ನ ಹಿರಿಯ ವಕೀಲ

    ಇಂದು ಬೆಳಗ್ಗಿನಿಂದ ಹುಲಿ ಸೆರೆ ಕಾರ್ಯಾಚರಣೆ ತೀವ್ರಗೊಂಡಿತ್ತು. ನಂತರ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದ ಬಳಿ ಸುಮಾರು 10 ವರ್ಷ ಪ್ರಾಯದ ಹೆಣ್ಣು ಹುಲಿ ಸೆರೆಯಾಗಿದೆ.

    ಇದನ್ನೂ ಓದಿ: ಯುವಕನ ಮೇಲೆ ಹುಲಿ ದಾಳಿ; ಮಗನನ್ನು ಹುಡುಕಲು ಹೋದ ತಂದೆಯ ಮೇಲೂ ಎರಗಿದ ವ್ಯಾಘ್ರ!

    ಇದೀಗ ಸ್ಥಳೀಯ ಜನತೆ ನೆಮ್ಮದಿಯ‌‌ ನಿಟ್ಟುಸಿರು ಬಿಟ್ಟಿದ್ದಾರೆ. ಇಬ್ಬರನ್ನು ಬಲಿ ಪಡೆದಿದ್ದ ಈ ಹುಲಿಯನ್ನು ಸೆರೆ ಹಿಡಿಯಲಾಗಿದ್ದು ಮೈಸೂರಿನ ಕೂರ್ಗಳ್ಳಿಗೆ ರವಾನೆ ಮಾಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts