More

    ಬೆಸುಗೆ ಹಾಕುತ್ತಿದ್ದಾಗಲೇ ದೇಹದಿಂದ ಬೇರೆಯಾಯ್ತು ಜೀವ; ವೆಲ್ಡರ್ ದುರಂತ ಸಾವು..

    ಬೆಂಗಳೂರು ಗ್ರಾಮಾಂತರ: ಬೆಸುಗೆ ಹಾಕುತ್ತಿದ್ದಾಗಲೇ ದೇಹದಿಂದ ಜೀವ ಬೇರೆಯಾದ ಹೃದಯವಿದ್ರಾವಕ ಪ್ರಕರಣವೊಂದು ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಂದು ಇಂಥದ್ದೊಂದು ದುರಂತ ಸಂಭವಿಸಿದೆ.

    ನೆಲಮಂಗಲ ತಾಲೂಕಿನ ಹೊಸನಿಜಗಲ್ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮಧುಗಿರಿ ಮೂಲದ ಫಿರೋಜ್​ (40) ಸಾವಿಗೀಡಾಗಿದ್ದಾನೆ. ಈತ ಸೋಂಪುರ ಹೋಬಳಿಯ ಕೂತಘಟ್ಟ ಗ್ರಾಮದಲ್ಲಿ ವಾಸವಿದ್ದು, ವೆಲ್ಡಿಂಗ್ ವೃತ್ತಿಯಿಂದ ಜೀವನ ಸಾಗಿಸುತ್ತಿದ್ದ.

    ಇಂದು ಮಧ್ಯಾಹ್ನ ಸೋಂಪುರ ಸಮೀಪದ ಹೊಸನಿಜಗಲ್ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಆಂಜನೇಯ ದೇವಾಲಯದ ವೆಲ್ಡಿಂಗ್ ಕೆಲಸದಲ್ಲಿದ್ದಾಗ ಹೈಟೆನ್ಷನ್​ ವಿದ್ಯುತ್ ತಂತಿಯಿಂದ ವಿದ್ಯುತ್ ಸಂಪರ್ಕದಿಂದ ತೀವ್ರ ಆಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಮೃತದೇಹವನ್ನ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ, ಸ್ಥಳದಲ್ಲೇ ನಾಲ್ವರ ಸಾವು..

    ಲಾಕ್​ಡೌನ್​ ಸೆಕ್ಸ್​: ಆರ್​ಟಿಐನಲ್ಲಿ ಬಹಿರಂಗವಾಯ್ತು ಆತಂಕಕಾರಿ ವಿಷಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts