ನವದೆಹಲಿ: ದೇಶದ ಗಮನಸೆಳೆದ ಉತ್ತರ ಪ್ರದೇಶದ ಕಾನ್ಪುರ ಸಮೀಪ ನಡೆದ ಎನ್ಕೌಂಟರ್ನಲ್ಲಿ ಎಂಟು ಪೊಲೀಸರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗ್ಯಾಂಗ್ಸ್ಟರ್ ವಿಕಾಸ್ ದುಬೆ ಯಾರು? ಆತನ ಹಿನ್ನೆಲೆ ಏನು? ಎಂಬಿತ್ಯಾದಿ ಸಹಜ ಕುತೂಹಲದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಉತ್ತರ ಪ್ರದೇಶದಲ್ಲಿ ಹಲವು ಹೈ ಪ್ರೊಫೈಲ್ ಹತ್ಯೆ ಪ್ರಕರಣಗಳಲ್ಲಿ ಬೇಕಾದ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಗ್ಯಾಂಗ್ಸ್ಟರ್ ವಿಕಾಸ್ ದುಬೆ. 2001ರಲ್ಲಿ ಬಿಜೆಪಿ ನಾಯಕ ಸಂತೋಷ್ ಶುಕ್ಲಾ ಹತ್ಯೆ ಪ್ರಕರಣದಲ್ಲಿ ಈತನ ಹೆಸರು ಮುಂಚೂಣಿಗೆ ಬಂತು. ಈ ಸಂಬಂಧ ಶಿವ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹತ್ಯೆ ನಡೆದ ಸಂದರ್ಭದಲ್ಲಿ ಶುಕ್ಲಾ ಬಿಜೆಪಿ ಸರ್ಕಾರದಲ್ಲಿ ರಾಜ್ಯ ಸಚಿವರಾಗಿದ್ದರು.
ಇದನ್ನೂ ಓದಿ: ಪಶ್ಚಿಮ ವಿಭಾಗದಲ್ಲಿ ಹತ್ತು ಠಾಣೆಗಳು ಸೀಲ್ಡೌನ್
ಆದಾಗ್ಯೂ, ಈ ಕೊಲೆ ಪ್ರಕರಣದಲ್ಲಿ ಗ್ಯಾಂಗ್ಸ್ಟರ್ ದುಬೆಯ ವಿರುದ್ಧ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ನಿರ್ದೋಷಿ ಎಂದು ಸೆಷೆನ್ಸ್ ಕೋರ್ಟ್ ಘೋಷಿಸಿತ್ತು. ಈತ ಬಿಕ್ರು ಗ್ರಾಮದ ನಿವಾಸಿ. ಹಲವಾರು ರಾಬರಿ, ಕಿಡ್ನಾಪ್ ಮತ್ತು ಹತ್ಯೆ ಪ್ರಕರಣಗಳ ಆರೋಪಿ. ದುಬೆ 2000ನೇ ಇಸವಿಯಲ್ಲಿ ಸಿದ್ಧೇಶ್ವರ ಪಾಂಡೆ ಎಂಬ ತಾರಾಚಾಂದ್ ಇಂಟರ್ ಕಾಲೇಜಿನ ಅಸಿಸ್ಟೆಂಟ್ ಮ್ಯಾನೇಜರ್/ಪ್ರಿನ್ಸಿಪಾಲ್ ಹತ್ಯೆ ಪ್ರಕರಣದಲ್ಲೂ ಭಾಗಿಯಾಗಿದ್ದ.
ಇದನ್ನೂ ಓದಿ: ನ್ಯಾಯಾಲಯಗಳ ರಜೆ ಆ.7ರವರೆಗೆ ವಿಸ್ತರಣೆ
ಸ್ಥಳೀಯ ನಿವಾಸಿಯೊಬ್ಬರು ದುಬೆ ವಿರುದ್ಧ ಕೊಲೆಯತ್ನದ ದೂರು ದಾಖಲಿಸಿದ ಕಾರಣ ಗುರುವಾರ ರಾತ್ರಿ ಆತನನ್ನು ಬಂಧಿಸುವುದಕ್ಕಾಗಿ ಪೊಲೀಸರು ತೆರಳಿದ್ದರು. ಇದೇ ವೇಳೆ ದುಬೆ ಬೆಂಬಲಿಗರು ನಡೆಸಿದ ದಾಳಿಗೆ ಪೊಲೀಸರು ಬಲಿಯಾಗಿದ್ದಾರೆ. ಹತ್ಯೆ ಪ್ರಕರಣದ ವಿವರಕ್ಕೆ ಈ ವರದಿ ಓದಿ: