More

    ಹೊಲದಲ್ಲಿ ಮಾವಿನಕಾಯಿ ಕಿತ್ತಿದ್ದಕ್ಕೆ ವ್ಯಕ್ತಿಯ ಹತ್ಯೆ; ಆರೋಪಿಗಳು ಪರಾರಿ

    ಜೈಪುರ: ಮಾವಿನ ಕಾಯಿ ಕೀಳುತ್ತಿದ್ದ ಎಂಬ ಆರೋಪದ ಮೇಲೆ ವ್ಯಕ್ತಿ ಒಬ್ಬನನ್ನು ಅಮಾನುಷವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

    ಸೂರಜ್​ ಕರಣ್​ ಮೀನಾ ಮೃತ ದುರ್ದೈವಿ ಎಂದು ತಿಳಿದು ಬಂದಿದ್ದು ಘಟನೆ ಸಂಬಂಧ 5 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಾವಿನಕಾಯಿ ಕಿತ್ತಿದ್ದಕ್ಕೆ ಕೊಲೆ

    ಘಟನೆ ಕುರಿತು ಪ್ರತಿಕ್ರಿಯಿಸಿರುವ ಪ್ರತ್ಯಕ್ಷದರ್ಶಿ ಮಹಾವೀರ್​ ಮಾವಿನ ಕಾಯಿ ಕೀಳುತ್ತಿದ್ದ ಎಂವ ಕಾರಣಕ್ಕೆ ಅವನ ಮೇಲೆ ಅಮಾನುಷವಾಗಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದರು.

    beating

    ನಂದಲಾಲ್​ ಬೈರ್ಯ ಎಂಬುವವರ ಜಮೀನಲ್ಲಿ ಇದ್ದ ಮಾವಿನ ಮರದಿಂದ ಹಣ್ಣನ್ನು ಕೀಳಲು ಯತ್ನಿಸಿದ್ದಾರೆ. ಈ ವೇಳೆ ಆಗಮಿಸಿದ ಬೈರ್ಯ ಹಾಗೂ ಮೀನಾ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ.

    ಇದನ್ನೂ ಓದಿ: ಸೈಕ್ಲೋನ್​ ಎಫೆಕ್ಟ್​ನಿಂದ ರಾಜ್ಯದಲ್ಲಿ ಮೇ 8ರಿಂದ ಮಳೆ ಚುರುಕು

    ಈ ವೇಳೆ ನಂದಲಾಲ್​ ತನ್ನ ಸಂಬಂಧಿಕರನ್ನು ಕರೆಸಿಕೊಂಡು ಮೀನಾರನ್ನು ಬೈಕಿನಲ್ಲಿ ರೊಲಾನ ಗ್ರಾಮಕ್ಕೆ ಕರೆದೊಯ್ದು ದೊಣ್ಣೆಯಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ.

    ಘಟನೆ ಕುರಿತು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಮಹಾವೀರ್​ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts