ನವದೆಹಲಿ: ವಿಧವೆಯರನ್ನು..ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ 34 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈತ ಮದುವೆಗೆ ಸಂಬಂಧಪಟ್ಟ ವೆಬ್ಸೈಟ್ಗಳ ಮೂಲಕ ಮಹಿಳೆಯರನ್ನು ಪರಿಚಯ ಮಾಡಿಕೊಂಡು, ಹಣ ಎಗರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಹೆಸರು ಅಂಚಿತ್ ಚಾವ್ಲಾ. ತಾನೊಬ್ಬ ಉದ್ಯಮಿಯೆಂದು ಪರಿಚಯಿಸಿಕೊಂಡು ಹಲವು ಮಹಿಳೆಯರಿಗೆ ಮೋಸ ಮಾಡಿದ್ದಾನೆ. ತನ್ನ ಹೆಸರು, ಲೊಕೇಶನ್ಗಳನ್ನು ಪದೇಪದೆ ಬದಲಿಸಿಕೊಳ್ಳುತ್ತಿದ್ದ. ತನ್ನ ಮೇಲೆ ನಂಬಿಕೆ ಬರುವಂತೆ ಮಾಡಿ ಇಲ್ಲಿಯವರೆಗೆ ಲಕ್ಷಾಂತರ ರೂಪಾಯಿ ಹಣವನ್ನು ಗಳಿಸಿದ್ದಾನೆ ಎಂದು ಹೇಳಿದ್ದಾರೆ.
ದೆಹಲಿಯ ಅಶೋಕ್ ವಿಹಾರ್ ಠಾಣೆಯಲ್ಲಿ ಮಹಿಳೆಯೋರ್ವರು ನೀಡಿದ ದೂರಿನ ಅನ್ವಯ ತನಿಖೆ ನಡೆಸಲಾಗಿತ್ತು. ತನಗೆ ಮುದಿತ್ ಚಾವ್ಲಾ ಎಂಬಾತ ಮೋಸ ಮಾಡಿದ್ದಾನೆ. 2018ರ ಡಿಸೆಂಬರ್ನಲ್ಲಿ ಮ್ಯಾಟ್ರಿಮೋನಿಯಲ್ ಸೈಟ್ವೊಂದರಲ್ಲಿ ನನಗೆ ಅವನ ಪರಿಚಯ ಆಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಇದನ್ನೂ ಓದಿ: ಅದೆಷ್ಟು ಚಿತ್ರಗಳಿಗೆ ಸ್ಫೂರ್ತಿಯಾಯ್ತು ಗೊತ್ತಾ ಕನ್ನಡದ ‘ಸ್ಕೂಲ್ ಮಾಸ್ಟರ್’?
ದೆಹಲಿಯ ಪಾಲಂನಲ್ಲಿ ಇರುವ ಬೆಡ್ಶೀಟ್ ಫ್ಯಾಕ್ಟರಿಯ ಮಾಲೀಕ ತಾನು. ಅಷ್ಟೇ ಅಲ್ಲ, ಟ್ರಾವೆಲ್ ಏಜೆನ್ಸಿಗಳ ಜತೆ ಡೀಲಿಂಗ್ ಕೂಡ ಇದೆ ಎಂದು ಹೇಳಿದ್ದ. ನನ್ನೊಂದಿಗೆ ಮೊದಲು ಇ-ಮೇಲ್ ಮೂಲಕ ಚಾಟ್ ಮಾಡುತ್ತಿದ್ದ. ನಂತರ ಫೋನ್ ನಂಬರ್ ತೆಗೆದುಕೊಂಡು ಕಾಲ್ ಕೂಡ ಮಾಡುತ್ತಿದ್ದ. ಇಬ್ಬರೂ ಮಾತನಾಡುತ್ತಿದ್ದೆವು. ವಾಟ್ಸ್ಆ್ಯಪ್ನಲ್ಲಿಯೂ ಸಂದೇಶ ವಿನಿಮಯ ಆಗುತ್ತಿತ್ತು. ಅರ್ಜೆಂಟ್ ಆಗಿ ಬೇಕು ಎಂದು ಹೇಳಿ ಮೊದಲ ಬಾರಿ ಸ್ವಲ್ಪ ಮೊತ್ತದ ಹಣ ಪಡೆದ. ಅದನ್ನು ಕೆಲವೇ ದಿನಗಳಲ್ಲಿ ಹಿಂದಿರುಗಿಸಿದ. ನಾನೂ ನಂಬಿದೆ. ನಂತರ ತನ್ನ ಉದ್ಯಮಕ್ಕೆ ಸಂಬಂಧಪಟ್ಟಂತೆ ಮಾಡಿರುವ ಸಾಲಗಳನ್ನು ತೀರಿಸಬೇಕು…ನೀನು ಬ್ಯಾಂಕ್ಗೆ ಪರ್ಸನಲ್ ಲೋನ್ ಅರ್ಜಿ ಸಲ್ಲಿಸು ಎಂದು ಹೇಳಿದ್ದ. ಹಾಗೇ ಮಾಡಿದ್ದೆ. ಆದರೆ ನಂತರ ನನಗೆ ವಂಚನೆ ಮಾಡಿ ಪರಾರಿಯಾಗಿದ್ದಾನೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಲಾಕ್ಡೌನ್ ವೇಳೆ ಗಾಂಜಾ ಮಾರಾಟ, ಮನೆಯಲ್ಲಿರೋ ವಿದ್ಯಾರ್ಥಿಗಳೇ ಇವರ ಟಾರ್ಗೆಟ್ !
ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದ. ಅವನು ಆಡುವ ಮಾತುಗಳನ್ನೆಲ್ಲ ಕೇಳಿ ನಾನು ನಂಬಿಕೊಂಡಿದ್ದೆ. 2019ರ ಡಿಸೆಂಬರ್ನವರೆಗೆ ಸುಮಾರು 17 ಲಕ್ಷ ರೂ.ನ್ನು ನನ್ನಿಂದ ಪಡೆದುಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.
ಮಹಿಳೆ ನೀಡಿದ ಮಾಹಿತಿಯನ್ನಾಧರಿಸಿ, ಆಕೆ ಹೇಳಿದ ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಿಂದಲೂ ವಿವರಣೆ ಪಡೆದಿದ್ದೆವು. ಆರೋಪಿ ಹಲವು ಹೆಸರುಗಳಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿಕೊಳ್ಳುತ್ತಿದ್ದ. ಮಹಿಳೆಯರನ್ನು ಪರಿಚಯ ಮಾಡಿಕೊಂಡು ಚಾಟ್ ಮಾಡುತ್ತಿದ್ದ. ಮದುವೆಯಾಗುವುದಾಗಿ ಹೇಳಿ ಹಣ ಪಡೆಯುತ್ತಿದ್ದ. ನಂತರ ಸಿಮ್, ಲೊಕೇಶನ್ಗಳನ್ನೆಲ್ಲ ಬದಲಿಸಿಕೊಂಡು ಕಣ್ಮರೆಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಹಿಳೆಗೆ ಮೋಸ ಮಾಡಿದ ಮಾದರಿಯಲ್ಲೇ ಇನ್ನೂ ನಾಲ್ವರಿಗೆ ಮಾಡಿದ್ದಾನೆ. ಅವನನ್ನು ಬಂಧಿಸಿ, ಲ್ಯಾಪ್ಟಾಪ್, ಎರಡು ಮೊಬೈಲ್, ಕಾರು, ಆಧಾರ್ ಕಾರ್ಡ್ಗಳು, ಆಭರಣಗಳನ್ನೆಲ್ಲ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)
ನಾಚಿಕೆ ಆಗಬೇಕು ತುಕ್ಡೆ ತುಕ್ಡೆ ಗ್ಯಾಂಗ್ನವರಿಗೆ..ರಾಷ್ಟ್ರಕ್ಕೇ ಮಾರಕ ಅವರು: ಹುತಾತ್ಮ ಯೋಧನ ಪತ್ನಿಯ ಆಕ್ರೋಶ