More

    ಸಿಖ್ಖರ ಪವಿತ್ರ ಕ್ಷೇತ್ರಕ್ಕೆ ನುಗ್ಗಿ ಅಪಚಾರಕ್ಕೆ ಯತ್ನಿಸಿದವ ಹೆಣವಾಗಿ ಹೋದ!

    ಪಂಜಾಬ್​: ಇಲ್ಲಿನ ಅಮೃತಸರದಲ್ಲಿರುವ ಸಿಖ್ಖರ ಪವಿತ್ರ ಕ್ಷೇತ್ರ ಗೋಲ್ಡನ್ ಟೆಂಪಲ್​​ ಒಳಕ್ಕೆ ನುಗ್ಗಿದ್ದಲ್ಲದೆ, ಅದರ ಪಾವಿತ್ರ್ಯಕ್ಕೆ ಧಕ್ಕೆ ತರಲು ಯತ್ನಿಸಿದವ ಹೆಣವಾಗಿ ಹೋಗಿದ್ದಾನೆ. ಇಂಥದ್ದೊಂದು ಘಟನೆ ಇಂದು ಸಂಜೆಯ ಸುಮಾರಿಗೆ ಇಲ್ಲಿ ನಡೆದಿದೆ.

    ಗೋಲ್ಡನ್ ಟೆಂಪಲ್ ಎಂದೂ ಕರೆಯಲಾಗುವ ಈ ದರ್ಬಾರ್ ಸಾಹಿಬ್​ ಒಳಕ್ಕೆ ಎಂದಿನಂತೆ ಪ್ರಾರ್ಥನೆ ನಡೆಯುತ್ತಿದ್ದ ಸಂದರ್ಭದಲ್ಲಿ ಯುವಕನೊಬ್ಬ ಇದ್ದಕ್ಕಿದ್ದಂತೆ ನುಗ್ಗಿದ್ದಲ್ಲದೆ ಸಿಖ್ಖರ ಪವಿತ್ರ ಗ್ರಂಥ ಗ್ರಂಥ್​ ಸಾಹಿಬ್​ಅನ್ನು ಗೋಲ್ಡನ್​ ಕಿರ್ಪನ್​ನಿಂದ ಹೊಡೆದಿದ್ದಾನೆ. ಈತನ ದಾಳಿಯ ಕೆಲ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.

    ಇದನ್ನೂ ಓದಿ: ಚಳಿಗಾಲದ ಅಧಿವೇಶನದಲ್ಲಾಗಲಿದೆ ‘ಮಂಡೇ’ಬಿಸಿ: ಸದನದಲ್ಲಿ ಕೋಲಾಹಲ ಎಬ್ಬಿಸಲಿದೆ ಮತಾಂತರ ನಿಷೇಧ ವಿಧೇಯಕ!

    ಯುವಕ ನುಗ್ಗಿ ದಾಂಧಲೆ ನಡೆಸುತ್ತಿದ್ದ ಬೆಚ್ಚಿಬಿದ್ದ ಕೆಲವರು ದಿಕ್ಕಾಪಾಲಾಗಿ ಓಡಿದರೂ ಕೆಲವೇ ಕ್ಷಣಗಳಲ್ಲಿ ಮಂದಿರದ ಒಳಗಿದ್ದ ಜನರು ಆತನನ್ನು ಸುತ್ತುವರಿದಿದ್ದರು. ಬಳಿಕ ಆತನನ್ನು ಶಿರೋಮಣಿ ಗುರುದ್ವಾರ ಪ್ರಬಂಧಕ್ ಕಮಿಟಿ (ಎಸ್​ಜಿಪಿಸಿ) ಅವರು ವಶಕ್ಕೆ ಪಡೆದು, ಎಸ್​ಜಿಪಿಸಿ ಹೆಡ್​ಕ್ವಾರ್ಟರ್ಸ್​ಗೆ ಕರೆದೊಯ್ದಿದ್ದರು. ಬಳಿಕ ಆತನನ್ನು ಸಾಯುವಂತೆ ಹೊಡೆಯಲಾಗಿದೆ ಎನ್ನಲಾಗಿದ್ದು, ನಂತರ ಆತನ ಶವವನ್ನು ಎಸ್​ಜಿಪಿಸಿ ಗೇಟ್ ಬಳಿ ಇಡಲಾಗಿತ್ತು.

    ಸಿಖ್ಖರ ಪವಿತ್ರ ಕ್ಷೇತ್ರಕ್ಕೆ ನುಗ್ಗಿ ಅಪಚಾರಕ್ಕೆ ಯತ್ನಿಸಿದವ ಹೆಣವಾಗಿ ಹೋದ!

    ಒಂದೇ ವಾರದಲ್ಲಿ ಮತ್ತೆ 30 ದೇಶಗಳಿಗೆ ವ್ಯಾಪಿಸಿದ ಒಮಿಕ್ರಾನ್​, ಮೂರೇ ದಿನಗಳೊಳಗೆ ದುಪ್ಪಟ್ಟಾಗುತ್ತಿರುವ ಸೋಂಕು!

    ಅಜ್ಜಿಯೊಂದಿಗೆ ಫ್ಲ್ಯಾಟ್​ ನೋಡಲು ಹೋಗಿದ್ದ 2 ವರ್ಷದ ಬಾಲಕ ಐದನೇ ಮಹಡಿಯಿಂದ ಬಿದ್ದು ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts