ನವದೆಹಲಿ: ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಹಿಜಾಬ್ ವಿಚಾರ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸುಪ್ರೀಂಕೋರ್ಟ್ ಈ ವಿಚಾರವಾಗಿ ಇಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಹಿಜಾಬ್ಗೂ ಸಿಖ್ಖರ ಕಿರ್ಪನ್ ಮತ್ತು ಟರ್ಬನ್ಗೂ ಹೋಲಿಕೆ ಇಲ್ಲ ಎಂಬುದಾಗಿ ಹೇಳಿದೆ.
ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಎತ್ತಿಹಿಡಿದು ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಿಚಾರಣೆ ಮಾಡಿದ ನ್ಯಾಯಮೂರ್ತಿ ಹೇಮಂತ್ ಗುಪ್ತ ಮತ್ತು ಸುಧಾಂಶು ಧುಲಿಯ ಅವರಿದ್ದ ಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎಂಬುದಾಗಿ ಎಎನ್ಐ ವರದಿ ಮಾಡಿದೆ.
ದೂರುದಾರರಲ್ಲಿ ಒಬ್ಬರಾಗಿರುವ ಇಸ್ಲಾಂ ಮತ್ತು ಅರೇಬಿಕ್ ವಿದ್ಯಾರ್ಥಿಯ ಪರವಾಗಿ ವಕೀಲ ನಿಜಾಮುದ್ದೀನ್ ಪಾಷಾ ವಾದಿಸುವಾಗ, ಸಿಖ್ಖರ ಕಿರ್ಪನ್ ಮತ್ತು ಟರ್ಬನ್ಗೆ ಹಿಜಾಬನ್ನು ಹೋಲಿಕೆ ಮಾಡಿದ್ದರು. ಹಿಜಾಬ್ ಮುಸ್ಲಿಂ ಹುಡುಗಿಯರ ಧಾರ್ಮಿಕ ಪದ್ಧತಿ ಎಂದ ಅವರು, ಸಿಖ್ ವಿದ್ಯಾರ್ಥಿಗಳೂ ಟರ್ಬನ್ ಧರಿಸುತ್ತಾರೆ ಎಂದಿದ್ದರು.
ಇದನ್ನು ಆಲಿಸಿದ ನ್ಯಾಯಮೂತ್ತಿ ಗುಪ್ತ ಅವರು, ಈ ವಿಚಾರವಾಗಿ ಸಿಖ್ಖರೊಂದಿಗೆ ಹೋಲಿಸುವುದು ಸರಿಯಲ್ಲ. ಕಿರ್ಪನ್ಗೆ ಸಂವಿಧಾನದಲ್ಲೇ ಮಾನ್ಯತೆ ಇದೆ, ಅದರೊಂದಿಗೆ ಇದನ್ನು ಹೋಲಿಸಬೇಡಿ. ಟರ್ಬನ್ಗೆ ಶಾಸನಾತ್ಮಕ ಅವಶ್ಯಕತೆಗಳಿವೆ, ಅವೆಲ್ಲ ಭಾರತೀಯ ಸಂಸ್ಕೃತಿಯಲ್ಲಿ ಸ್ಥಾಪಿತವಾದ ಆಚರಣೆಗಳಾಗಿವೆ ಎಂದಿದ್ದಾರೆ. – ಏಜೆನ್ಸೀಸ್
ಇನ್ನೂ ನಾಲ್ಕು ದಿನ ರಾಜ್ಯದಲ್ಲಿ ಮಳೆ ಮತ್ತಷ್ಟು ಜೋರು; ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ