| ಹರ್ಷವರ್ಧನ್ ಬ್ಯಾಡನೂರು
ಚಿತ್ರ: ನೈಟ್ ಕರ್ಫ್ಯೂ
ನಿರ್ದೇಶನ: ರವೀಂದ್ರ ವೆಂಶಿ
ನಿರ್ಮಾಣ: ಚಂದ್ರಶೇಖರ್
ತಾರಾಗಣ: ಮಾಲಾಶ್ರೀ, ರಂಜಿನಿ ರಾವನ್, ಪ್ರಮೋದ್ ಶೆಟ್ಟಿ, ಸಾಧು ಕೋಕಿಲ, ಪಾವಗಡ ಮಂಜು, ರಂಗಾಯಣ ರಘು, ವರ್ಧನ್ ತೀರ್ಥಹಳ್ಳಿ, ಅಶ್ವಿನ್ ಹಾಸನ್ ಮುಂತಾದವರು
ಕರೊನಾ ಲಾಕ್ಡೌನ್ ಸಮಯದಲ್ಲಿ ನಡೆದ ಘಟನೆಗಳ ಬಗ್ಗೆ ಹಲವು ಸಿನಿಮಾಗಳು, ವೆಬ್ಸರಣಿಗಳು ಬಂದಿವೆ. ಜನ ಎದುರಿಸಿದ ಸಮಸ್ಯೆ, ಗುಳೆ ಹೊರಟ ಜನರ ನೋವು, ಚಿಕಿತ್ಸೆ ಸಿಗದೇ, ಆಸ್ಪತ್ರೆಯಲ್ಲಿ ಬೆಡ್ ಇಲ್ಲದೇ, ಆಕ್ಸಿಜನ್ ಕೊರತೆಯಿಂದ ಉಂಟಾದ ಸಂಕಷ್ಟಗಳನ್ನು ಅನಾವರಣ ಮಾಡಲಾಗಿದೆ. ಆದರೆ, ನಿರ್ದೇಶಕ ರವೀಂದ್ರ ವೆಂಶಿ ಕರೊನಾ ಸಮಯದಲ್ಲೇ ನಡೆದ ವಿಲಕ್ಷಣ ಕೆಮ್ಗಳನ್ನು ಆಧಾರವಾಗಿಟ್ಟುಕೊಂಡು “ನೈಟ್ ಕರ್ಫ್ಯೂ’ ಸಿನಿಮಾ ಮಾಡಿದ್ದಾರೆ. ಹಾಗಾದರೆ ಹೇಗಿದೆ ಈ ಚಿತ್ರ?
ಅದು ನಿಮ್ಮ ಆರೋಗ್ಯಾಲಯ ಆಸ್ಪತ್ರೆ. ಅದರ ಹಿರಿಯ ವೈದ್ಯೆ ಡಾ. ದುರ್ಗ (ಮಾಲಾಶ್ರೀ), ಡಾ. ವೇದಾ (ರಂಜಿನಿ) ಮತ್ತು ಸಿಬ್ಬಂದಿ ಕರೊನಾ ರೋಗಿಗಳ ಆರೈಕೆಯಲ್ಲಿ ತೊಡಗಿರುತ್ತಾರೆ. ಅದೇ ಸಮಯದಲ್ಲಿ ಅಲ್ಲಿಗೆ ಒಬ್ಬ ಯುವತಿಯನ್ನು ಆ್ಯಂಬುಲೆನ್ಸ್ನಲ್ಲಿ ಕರೆತರುವ ವ್ಯಕ್ತಿಗಳಿಬ್ಬರು, “ಆಕೆಗೆ ಕರೊನಾ ಬಂದು, ಆರೋಗ್ಯ ಸಮಸ್ಯೆ ಉಂಟಾಗಿದೆ. ಬೆಳಗ್ಗೆಯಿಂದ ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗಳನ್ನು ಸುತ್ತುತ್ತಿದ್ದೇವೆ. ಎಲ್ಲಿಯೂ ಅಡ್ಮಿಟ್ ಮಾಡಿಕೊಳ್ಳುತ್ತಿಲ್ಲ’ ಎಂದು ಬಿಕ್ಕುತ್ತಾ ಕೈಮುಗಿಯುತ್ತಾರೆ. ಬಳಿಕ ಡಾ. ವೇದಾ ಆ ಯುವತಿಯನ್ನು ಅಡ್ಮಿಟ್ ಮಾಡಿಕೊಳ್ಳುತ್ತಾರೆ. ಆದರೆ, ಚಿಕಿತ್ಸೆ ಕೊಡುವ ಮುನ್ನವೇ ಆ ಯುವತಿ ಸಾವಿಗೀಡಾಗಿರುತ್ತಾಳೆ. ಮತ್ತೊಂದೆಡೆ ಗೆಳೆಯರಾದ ಸಾಧು ಮತ್ತು ಮುತ್ತ (ಪಾವಗಡ ಮಂಜು) ಬಾರ್ಗೆ ಹೋಗಿ ಮದ್ಯದ ಬಾಟಲ್ಗಳನ್ನು ಕದಿಯಲು ಪ್ಲಾ$್ಯನ್ ಮಾಡುತ್ತಾರೆ. ಬೀಗ ಮುರಿದು ಬಾರ್ ಒಳಗೆ ಹೋದರೆ, ಅಲ್ಲೊಬ್ಬ ವ್ಯಕ್ತಿ ಬಿದ್ದಿರುತ್ತಾನೆ. ಹೀಗೆ ಎರಡು ಟ್ರಾ$್ಯಕ್ಗಳಲ್ಲಿ ಸಾಗುವ ಕಥೆ ಒಂದೆಡೆ ಸೇರುತ್ತದೆ. ಹಾಗಾದರೆ ಆ ಯುವತಿ ಯಾರು? ಆಕೆ ಸಾವಿಗೆ ಕರೊನಾ ಕಾರಣವೇ? ಈ ಎಲ್ಲ ಪ್ರಶ್ನೆಗಳಿಗೆ “ನೈಟ್ ಕ್ಯೂರ್’ನಲ್ಲಿ ಉತ್ತರವಿದೆ.
ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಎಂದಿನಂತೆ ವೈದ್ಯೆಯ ಪಾತ್ರವಾಗಿದ್ದರೂ “ದುರ್ಗಿ’ಯ ಅವತಾರ ತಾಳಿದ್ದಾರೆ. ಉಳಿದಂತೆ ಪ್ರಮೋದ್ ಶೆಟ್ಟಿ, ರಂಜಿನಿ, ವರ್ಧನ್, ಅಶ್ವಿನ್ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ಸಾಧು ಕೋಕಿಲ, ಪಾವಗಡ ಮಂಜು, ರಂಗಾಯಣ ರು ಅಲ್ಲಲ್ಲಿ ನಗಿಸುತ್ತಾರೆ. ಒಂದೇ ರಾತ್ರಿ ನಡೆಯುವ ಕಥೆಯಾದರೂ ಅಲ್ಲಲ್ಲಿ ಲಾಜಿಕ್ ಮಿಸ್ ಆಗಿದೆ. ಚಿತ್ರಕಥೆ ಮತ್ತಷ್ಟು ಗಟ್ಟಿಯಾಗಿದ್ದರೆ ಪ್ರೇಕ್ಷಕರಿಗೆ ಒಂದೊಳ್ಳೆ ಥ್ರಿಲ್ ಸಿಗುತ್ತಿತ್ತು. ಆದರೆ, ನೈಜ ಘಟನೆಯಾಧಾರಿತ ಕೆಮ್ ಥ್ರಿಲ್ಲರ್ ಜಾನರ್ ಅಭಿಮಾನಿಗಳಿಗೆ ಮತ್ತು ಮಾಲಾಶ್ರೀ ್ಯಾನ್ಸ್ಗೆ “ನೈಟ್ ಕ್ಯೂರ್’ ಇಷ್ಟವಾಗಬಹುದು.