More

    ಮೈಸೂರು ಮೃಗಾಲಯದಲ್ಲಿ ಆನೆ ದಾಳಿಗೆ ಮಾವುತ ಸಾವು

    ಮೈಸೂರು: ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಶುಕ್ರವಾರ ಸಂಜೆ ಆನೆ ದಾಳಿಗೆ ಮಾವುತರೊಬ್ಬರು ಮೃತಪಟ್ಟಿದ್ದಾರೆ.

    ಲಲಿತಾದ್ರಿಪುರ ನಿವಾಸಿ, ಮೃಗಾಲಯದಲ್ಲಿ ಹಲವು ವರ್ಷಗಳಿಂದ ಮಾವುತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಹರೀಶ್ (34) ಮೃತ ದುರ್ದೈವಿ.

    ಕಳೆದ ಐದು ದಿನಗಳಿಂದ ರಜೆ ಮೇಲೆ ತೆರಳಿದ್ದ ಹರೀಶ್ ಇಂದು ಕೆಲಸಕ್ಕೆ ಹಾಜರಾಗಿದ್ದರು. ಸಂಜೆ ಆನೆಗಳನ್ನು ಕಟ್ಟಿ ಹಾಕುವಾಗ ಆನೆಯೊಂದು ಏಕಾಏಕಿ ದಾಳಿ ನಡೆಸಿದೆ. ಆನೆ ಹರೀಶ್ ಅವರನ್ನು ಸೊಂಡಿಲಿನಿಂದ ಎತ್ತಿ ಕೆಳಕ್ಕೆ ಹಾಕಿ ಹೊಸಕಿದೆ. ಆನೆ ದಾಳಿಯನ್ನು ಗಮನಿಸಿದ ಇತರೆ ಸಿಬ್ಬಂದಿ ಆನೆಯನ್ನು ಓಡಿಸಿ ಹರೀಶ್ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಿದರು. ಆದರೆ, ದಾಳಿಯಿಂದ ತೀವ್ರ ಸ್ವರೂಪ ದಲ್ಲಿ ಗಾಯಗೊಂಡಿದ್ದ ಹರೀಶ್ ಅವರ ದೇಹ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.

    ಮೃತದೇಹವನ್ನು ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ. ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts