More

    ಕೊನೆಗೂ ಕಂಗನಾ ರಣಾವತ್​, ಮಹೇಶ್​ ಭಟ್​ಗೆ ಮುಂಬೈ ಪೊಲೀಸರಿಂದ ಬಂತು ಬುಲಾವ್​!

    ಸುಶಾಂತ್​ ಸಿಂಗ್​ ರಜಪೂತ್ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊರ ತಿರುವು ಪಡೆದುಕೊಳ್ಳುತ್ತಿದೆ. ಕಂಗನಾ ರಣಾವತ್​ ಅವರಂತೂ ಸ್ವಜನಪಕ್ಷಪಾತ ವಿಚಾರವನ್ನೇ ಹೈಲೈಟ್​ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಸುಶಾಂತ್​ ಸಾವಿನ ವಿಚಾರಣೆಗಾಗಿ ನನ್ನನ್ನೂ ಕರೆಯಿರಿ. ನನ್ನಿಂದಲೂ ಒಂದಷ್ಟು ಮಾಹಿತಿಯನ್ನು ಪಡೆಯಿರಿ ಎಂದು ಅಂಗಲಾಚಿಕೊಂಡಿದ್ದರು. ಅದರಂತೆ ಕೊನೆಗೂ ಕಂಗನಾ ಅವರ ಆಸೆಯನ್ನು ಮುಂಬೈ ಪೊಲೀಸ್​ ಈಡೇರಿಸಿದ್ದಾರೆ.

    ಇದನ್ನೂ ಓದಿ: ಸುಶಾಂತ್​ ಆತ್ಮಹತ್ಯೆ ಪ್ರಕರಣ: ಸೋಮವಾರ ಮಹೇಶ್​ ಭಟ್​ ವಿಚಾರಣೆ

    ಹೌದು, ಸುಶಾಂತ್​ ಸಿಂಗ್ ಸಾವಿನ ವಿಚಾರವಾಗಿ ಕಂಗನಾ ರಣಾವತ್​, ಮಹೇಶ್​ ಭಟ್​, ಕರಣ್​ ಜೋಹರ್​ ಒಡೆತನದ ಧರ್ಮ ಪ್ರೊಡಕ್ಷನ್​ನ ಸಿಇಒ ಅಪೂರ್ವ ಮೆಹ್ತಾ ಅವರಿಗೆ ಮುಂಬೈ ಪೊಲೀಸ್​ ಇಲಾಖೆ ಸಮನ್​ ನೀಡಿ ವಿಚಾರಣೆಗೆ ಆಹ್ವಾನಿಸಿದೆ.

    ಇಷ್ಟಕ್ಕೂ ಸುಶಾಂತ್​ ಆತ್ಮಹತ್ಯೆ ಪ್ರಕರಣಕ್ಕೂ, ಕಂಗನಾ ರಣಾವತ್​ ಅವರಿಗೂ ಸಂಬಂಧವೇನು ಎಂಬ ಪ್ರಶ್ನೆ ಸಹಜವೇ. ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ, ಅವರಿಗೆ ದೊಡ್ಡ ಮಟ್ಟದಲ್ಲಿ ಕಂಬನಿ ಮಿಡಿದಿದ್ದು, ಸಂತಾಪ ಸೂಚಿಸಿದ್ದು ಅದೇ ಕಂಗನಾ. ಬಾಲಿವುಡ್​ನಲ್ಲಿ ಪ್ರಚಲಿತದಲ್ಲಿರುವ ಸ್ವಜನಪಕ್ಷಪಾತದ ಕುರಿತಾಗಿ ಪ್ರಸ್ತಾಪಿಸಿದ್ದ ಕಂಗನಾ, ಅದೇ ನೆಪೋಟಿಸಂನಿಂದ ಸುಶಾಂತ್ ಆತ್ಮಹತ್ಯೆಯ ದಾರಿ ತುಳಿಯಬೇಕಾಯಿತು ಎಂದು ಹೇಳಿದ್ದರು.

    ಇದನ್ನೂ ಓದಿ: ನೀನು ಬಿ-ಗ್ರೇಡ್​ ನಟಿಯಲ್ಲ … ಹಾಗಂತ ತಾಪ್ಸಿಗೆ ಹೇಳಿದ್ದು ಯಾರು?

    ಈಗಾಗಲೇ 37ಕ್ಕೂ ಅಧಿಕ ಮಂದಿಯನ್ನು ಸುಶಾಂತ್​ ಸಾವಿನ ವಿಚಾರವಾಗಿ ಮುಂಬೈ ಪೊಲೀಸ್​ ಇಲಾಖೆ ವಿಚಾರಣೆ ಮಾಡಿ, ಸೂಕ್ತ ದಾಖಲೆಗಳನ್ನು ಸಂಗ್ರಹಿಸಿದೆ. ‘ಇನ್ನೆರಡು ದಿನಗಳಲ್ಲಿ ಮಹೇಶ್ ಭಟ್​ ಅವರ ಹೇಳಿಕೆಯನ್ನು ಪಡೆಯಲಿದ್ದು, ಅದಾದ ಬಳಿಕ ಕಂಗನಾ ಹಾಜರಾಗಲಿದ್ದಾರೆ. ಅದಾದ ಮೇಲೆ ಧರ್ಮ ಪ್ರೊಡಕ್ಷನ್ಸ್​ನ ಸಿಇಒ ಭಾಗಿಯಾಗಲಿದ್ದಾರೆ. ಕರಣ್​ ಜೋಹರ್ ಸಹ ಬರುವ ಸಾಧ್ಯತೆ ಇದೆ ಎಂದು ಮಹಾರಾಷ್ಟ್ರ ಗೃಹ ಮಂತ್ರಿ ಹೇಳಿದ್ದಾರೆ. (ಏಜೆನ್ಸೀಸ್​)

    ‘ಪವರ್​ ಸ್ಟಾರ್​’ಗೂ ಎದುರಾಯ್ತು ಪೈರಸಿ ಕಾಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts