More

    ಸುಶಾಂತ್​ ಆತ್ಮಹತ್ಯೆ ಪ್ರಕರಣ: ಸೋಮವಾರ ಮಹೇಶ್​ ಭಟ್​ ವಿಚಾರಣೆ

    ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್​ ಮಂದಿಯ ವಿಚಾರಣೆ ನಡೆಸುತ್ತಿರುವ ಮುಂಬೈ ಪೊಲೀಸರು ಸೋಮವಾರ ಹಿರಿಯ ನಿರ್ಮಾಪಕ, ನಿರ್ದೇಶಕ ಮಹೇಶ್​ ಭಟ್​ ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೆ ಅವರಿಗೆ ನೋಟಿಸ್​ ನೀಡಲಾಗಿದೆ ಎಂದು ಹೇಳಲಾಗಿದೆ.

    ಇದೇ ವಿಷಯವಾಗಿ ಶೀಘ್ರದಲ್ಲೇ ಕರಣ್​ ಜೋಹರ್​ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಈಗಾಗಲೆ ಇವರ ಮ್ಯಾನೇಜರ್​ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಲಾಗಿದೆ ಎಂದು ಮುಂಬೈ ಪೊಲೀಸ್​ ಮೂಲಗಳು ಹೇಳಿವೆ.

    ಸುಶಾಂತ್​ ಆತ್ಮಹತ್ಯೆ ಪ್ರಕರಣದಲ್ಲಿ ಕರಣ್​ ಜೋಹರ್​ ಅವರ ಹೆಸರು ಜೋರಾಗಿ ಕೇಳಿಬಂದಿತ್ತು. ಅಲ್ಲದೆ, ಇವರ ವಿರುದ್ಧ ಸ್ವಜನಪಕ್ಷಪಾತದ ಆರೋಪವೂ ಇದೆ. ಆದ್ದರಿಂದ, ಮೊದಲಿಗೆ ಅವರ ಮ್ಯಾನೇಜರ್​ ಅನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿವೆ.

    ಇವರ ವಿಚಾರಣೆಯ ಬಳಿಕ ಕರಣ್​ ಜೋಹರ್​ ವಿಚಾರಣೆ ನಡೆಸುವ ಅವಶ್ಯಕತೆಯನ್ನು ನಿರ್ಧರಿಸಲಾಗುವುದು. ಬಳಿಕ ಕರಣ್​ ಜೋಹರ್​ ಅವರನ್ನು ವಿಚಾರಣೆಗೆ ಕರೆಸಲಾಗುವುದು ಎಂದು ತಿಳಿಸಿವೆ.

    ಇದನ್ನೂ ಓದಿ: ನೀನು ಬಿ-ಗ್ರೇಡ್​ ನಟಿಯಲ್ಲ … ಹಾಗಂತ ತಾಪ್ಸಿಗೆ ಹೇಳಿದ್ದು ಯಾರು?

    ಮಹೇಶ್​ ಭಟ್​ ಅವರಿಗೆ ಬಾಂದ್ರಾ ಪೊಲೀಸ್​ ಠಾಣೆಗೆ ಬರಲು ಸೂಚಿಸಲಾಗಿದೆ. ಮಧ್ಯಾಹ್ನ 12 ಗಂಟೆಗೆ ಬರಲು ಸೂಚಿಸಿದ್ದು, ಅಲ್ಲಿಗೆ ಬಂದಾಗ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಹೇಳಿವೆ.

    ವಹಿವಾಟಿನ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ. ಬಾಲಿವುಡ್​ನಲ್ಲಿ ಹೊರಗಿನ ಪ್ರತಿಭೆಗಳನ್ನು ಹೊಸಕುವ ಕೆಟ್ಟ ಸಂಪ್ರದಾಯ ಮತ್ತು ದುಷ್ಟಕೂಟ ಏನಾದರು ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿವೆ.

    ಮಾಹಿತಿಯ ಪ್ರಕಾರ ಒಟ್ಟು 39 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ನೋಟಿಸ್​ ಜಾರಿ ಮಾಡಿದ್ದಾರೆ. ಸಿನಿವಿಮರ್ಶಕ ರಾಜೀವ್​ ಮಸಾಮಡ್​, ನಿರ್ದೇಶಕ-ನಿರ್ಮಾಪಕ ಸಂಜಯ್​ ಲೀಲಾ ಬನ್ಸಾಲಿ, ಚಿತ್ರನಿರ್ಮಾಪಕ ಆದಿತ್ಯ ಚೋಪ್ರಾ ಅಲ್ಲದೆ, ಸುಶಾಂತ್​ ಸಿಂಗ್​ ರಜಪೂತ್​ ಜತೆ ಸಂಪರ್ಕ ಹೊಂದಿದ್ದವರು, ಸ್ನೇಹಿತರು ಕೂಡ ಇದರಲ್ಲಿ ಸೇರಿದ್ದಾರೆ.

    ಸೊಸೆಯ ದುಷ್ಟಶಕ್ತಿ ಓಡಿಸಲು ಮಾವನ ಸಾಯಿಸಿದ ‘ದೇವಮಾನವ’ ಅರೆಸ್ಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts