More

    ಕಂದೇಗಾಲದಲ್ಲಿ ಮಹದೇಶ್ವರ ಜಾತ್ರಾ ಮಹೋತ್ಸವ

    ಸರಗೂರು: ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ಮಹದೇಶ್ವರ ಜಾತ್ರಾ ಮಹೋತ್ಸವ ಮತ್ತು ದನಗಳ ಪ್ರದರ್ಶನ ವಿಜೃಂಭಣೆಯಿಂದ ನಡೆಯಿತು.

    ಸೋಮವಾರದಿಂದ ಬುಧವಾರದವರೆಗೆ ಕಂದೇಗಾಲ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಮತ್ತು ದನಗಳ ಪ್ರದರ್ಶನ ನಡೆಯಲಿದ್ದು, ಮಂಗಳವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹದೇಶ್ವರ ರಥೋತ್ಸವ ನಡೆಯಿತು. ಮಹದೇಶ್ವರ ದೇವಾಲಯದ ಮುಂಭಾಗದಲ್ಲಿ ಗ್ರಾಮಸ್ಥರು ಕೊಂಡೋತ್ಸವ ಸಿದ್ಧಪಡಿಸಿದ್ದರು. ಉತ್ಸವಮೂರ್ತಿಯನ್ನು ದೇವಾಲಯ ಮುಂಭಾಗಕ್ಕೆ ತಂದು ವಿವಿಧ ಪೂಜೆ ನೆರವೇರಿಸಿದ ಬಳಿಕ ಕೊಂಡೋತ್ಸವ ನೆರವೇರಿತು.

    ಬುಧವಾರ ಬೆಳಗ್ಗೆ 5 ಗಂಟೆಗೆ ಬಿಲ್ವಾರ್ಚನೆ ಮತ್ತು ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ರಾತ್ರಿ 9 ಗಂಟೆಗೆ ಜೂನಿಯರ್ ವಿಷ್ಣುವರ್ಧನ್ ಮತ್ತು ಚೇತನ್ ಮೆಲೋಡಿಸ್ ವತಿಯಿಂದ ಆರ್ಕೇಸ್ಟ್ರಾ ಏರ್ಪಡಿಸಲಾಗಿದೆ. ಜಾತ್ರೆಯ ಅಂಗವಾಗಿ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ದಿ ಸ್ಟಾರ್ ಕ್ರಿಕೆಟರ್ಸ್‌ ಕ್ಲಬ್ ವತಿಯಿಂದ ಕ್ರಿಕೆಟ್ ಪಂದ್ಯಾವಳಿ, ಗುಂಡು ಎಸೆತ ಮತ್ತು ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ದನಗಳ ಪ್ರದರ್ಶನದಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಗುತ್ತದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸರಗೂರು ಪಟ್ಟಣದ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

    ಕಂದೇಗಾಲ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದ ಗೌರವಾಧ್ಯಕ್ಷ, ಕೆ.ಚಿಕ್ಕವೀರ ನಾಯಕ, ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಕಮಿಟಿ ಅಧ್ಯಕ್ಷ ಪಟೇಲ್ ವಿ.ರಾಜಪ್ಪ, ಉಪಾಧ್ಯಕ್ಷ ದಾಸಭೋವಿ, ಕಾರ್ಯದರ್ಶಿ ಕಂದೇಗಾಲ ಸೋಮಣ್ಣ, ಕೆ.ವಿ.ರುದ್ರಯ್ಯ, ಖಜಾಂಚಿ ಬಿದರಹಳ್ಳಿ ಮಾದಪ್ಪ, ಅಕ್ಕಪಕ್ಕದ ಗ್ರಾಮಸ್ಥರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts