More

    ಅಕ್ಷಯ್​ ಜತೆಗೆ ಮಾಧವನ್​; ಇದು ನಂಬಿ ಎಫೆಕ್ಟ್​

    ಮುಂಬೈ: ತಮಿಳು ನಟ ಆರ್​. ಮಾಧವನ್​ಗೆ ಬಾಲಿವುಡ್​ ಹೊಸದೇನಲ್ಲ. ಈ ಹಿಂದೆಯೂ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಆದರೆ, ‘ರಾಕೆಟ್ರಿ – ದಿ ನಂಬಿ ಎಫೆಕ್ಟ್​’ ಚಿತ್ರದ ನಂತರ ಮಾಧವನ್​ಗೆ ಬಾಲಿವುಡ್​ನಲ್ಲಿ ಆಫರ್​ಗಳು ಹೆಚ್ಚಾಗುತ್ತಿವೆ. ಮಾಧವನ್​ಗೆ ಬಾಲಿವುಡ್​ನಿಂದ ಹಲವು ಆಫರ್​ಗಳಿದ್ದು, ಈ ಪೈಕಿ ಅವರು ಅಕ್ಷಯ್​ ಕುಮಾರ್​ ಅಭಿನಯದ ಹೊಸ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ.

    ಇದನ್ನೂ ಓದಿ: ಆಗ ಚಾಕೊಲೇಟ್​ ಬಾಯ್​, ಈಗ ಆಂಗ್ರಿ ಯಂಗ್​ ಮ್ಯಾನ್​; ಮತ್ತೆ ಬಂದ ಪ್ರಜ್ವಲ್​ ಸಹೋದರ​ …

    ಬ್ರಿಟಿಷರ ವಿರುದ್ಧ ತೊಡೆ ತಟ್ಟಿದ ಸಿ. ಶಂಕರನ್​ ನಾಯರ್​ ಎಂಬ ಜನಪ್ರಿಯ ವಕೀಲರ ಕುರಿತು ಬಾಲಿವುಡ್​ನಲ್ಲಿ ಬಯೋಪಿಕ್ ಆಗುತ್ತಿರುವ ಸುದ್ದಿ ಕೇಳಿರಬಹುದು. ಈ ಚಿತ್ರವನ್ನು ಕರಣ್​ ಜೋಹರ್​ ನಿರ್ಮಿಸುತ್ತಿದ್ದು, ಶಂಕರನ್​ ನಾಯರ್​ ಅವರ ಪಾತ್ರದಲ್ಲಿ ಅಕ್ಷಯ್​ ಕುಮಾರ್​ ನಟಿಸುತ್ತಿದ್ದಾರೆ. ಈಗಾಗಲೇ ಕಳೆದ ವರ್ಷವೇ ಚಿತ್ರೀಕರಣ ಪ್ರಾರಂಭವಾಗಿದ್ದು, ಹಲವು ಮಹತ್ವದ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ.

    ಈಗ ಈ ತಂಡಕ್ಕೆ ಆರ್​. ಮಾಧವನ್​ ಅವರ ಸೇರ್ಪಡೆಯಾಗಿದೆ. ಈ ಚಿತ್ರದಲ್ಲಿ ಮಾಧವನ್​ ಸಹ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರೀಕರಣದಲ್ಲೂ ಭಾಗವಹಿಸಿದ್ದಾರೆ. ಈ ಚಿತ್ರವನ್ನು ಜಲಯನ್​ವಾಲಾ ಬಾಗ್​ ಹತ್ಯಾಕಾಂಡದ ಕುರಿತು ಸುತ್ತಲಿದ್ದು, 20 ಮತ್ತು 30ರ ಕಾಲಘಟ್ಟದ ಚಿತ್ರವಾಗಿದೆ. ಈ ಹತ್ಯಾಕಾಂಡದ ವಿರುದ್ಧ ನ್ಯಾಯಾಲಯದಲ್ಲಿ ಶಂಕರನ್​ ನಾಯರ್​ ಅವರು ಹೋರಾಡಿ, ನ್ಯಾಯ ಕೊಡಿಸಿದ್ದರು. ಆ ಘಟನೆಯನ್ನಾಧರಿಸಿ, ರಘು ಪಲಟ್​ ಮತ್ತು ಅವರ ಪತ್ನಿ ಪುಷ್ಪಾ ಪಲಟ್​ ಬರೆದಿರುವ, ‘ದಿ ಕೇಸ್​ ದಟ್​ ಶುಕ್​ ದಿ ಬ್ರಿಟಿಷ್​ ಎಂಪೈರ್​’ ಎಂಬ ಪುಸ್ತಕವನ್ನಾಧರಿಸಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ.

    ಇದನ್ನೂ ಓದಿ: ‘ಕಡಲತೀರದ ಭಾರ್ಗವ’ ಚಿತ್ರದಿಂದ ಮಧುರವಾದ ಹಾಡು ಬಂತು …

    ಸದ್ಯಕ್ಕೆ, ‘ಶಂಕರನ್​ ನಾಯರ್​ ಬಯೋಪಿಕ್​” ಎಂದು ಕರೆಯಲ್ಪಡುತ್ತಿರುವ ಈ ಚಿತ್ರವನ್ನು ಕರಣ್​ ಸಿಂಗ್​ ತ್ಯಾಗಿ ನಿರ್ದೇಶನ ಮಾಡುತ್ತಿದ್ದು, ಅಕ್ಷಯ್​ ಕುಮಾರ್​​, ಮಾಧವನ್​ ಅಲ್ಲದೆ ಅನನ್ಯಾ ಪಾಂಡೆ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ದ್ವಿತೀಯ ಹಂತದ ಚಿತ್ರೀಕರಣ ಇದೀಗ ನಡೆಯುತ್ತಿದೆ. ಫೆಬ್ರವರಿ ಕೊನೆಯ ಹೊತ್ತಿಗೆ ಚಿತ್ರೀಕರಣ ಮುಗಿಯಲಿದೆ ಎಂದು ಹೇಳಲಾಗುತ್ತಿದೆ.

    ಚಿರಂಜೀವಿ, ವಿಶಾಖಪಟ್ಟಣಂಗೆ ಶಿಫ್ಟ್​ ಆಗುವುದಕ್ಕೆ ಯೋಚಿಸುತ್ತಿರುವುದು ಅದೇ ಕಾರಣಕ್ಕಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts