ಚಿಕ್ಕೋಡಿ: ರಾಜ್ಯಾದ್ಯಂತ ಕರೊನಾ ದಾಳಿ ಮುಂದುವರಿದಿದ್ದು, ಶ್ರೀಶೈಲ ಜಗದ್ಗುರುಗಳಾದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗೂ ಕರೊನಾ ಸೋಂಕು ತಗುಲಿದೆ. ಸದ್ಯ ಅವರು ಯಡೂರಿನಲ್ಲಿ ಹೋಂ ಐಸೋಲೇಶನ್ಗೆ ಒಳಗಾಗಿದ್ದಾರೆ.
ಶ್ರೀಗಳು ಯುಗಾದಿ ನಿಮಿತ್ತವಾಗಿ ಶ್ರೀಶೈಲಕ್ಕೆ ತೆರಳಿದ್ದರು. ಅಲ್ಲಿಂದ ಯಡೂರಿಗೆ ವಾಪಾಸಾದ ನಂತರ ಅವರಲ್ಲಿ ಜ್ವರ ಕಾಣಿಸಿಕೊಂಡಿದೆ. ಆ ಹಿನ್ನೆಲೆಯಲ್ಲಿ ಕರೊನಾ ಪರೀಕ್ಷೆ ಮಾಡಿಸಲಾಗಿತ್ತು. ಬುಧವಾರದಂದು ಕರೊನಾ ವರದಿ ಬಂದಿದ್ದು ಅದರಲ್ಲಿ ಅವರಿಗೆ ಸೋಂಕು ತಗುಲಿರುವುದು ದೃಢವಾಗಿದೆ.
ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಹೋಂ ಐಸೋಲೇಶನ್ನಲ್ಲಿದ್ದು, ಸೂಕ್ತ ಚಿಕಿತ್ಸೆ ಪಡೆಯುವುದಾಗಿ ತಿಳಿಸಿರುವ ಅವರು ಭಕ್ತಾದಿಗಳು ಆತಂಕ ಪಡಬಾರದೆಂದು ಮನವಿ ಮಾಡಿದ್ದಾರೆ.
ಮ್ಯಾಚ್ಗೆ ಮೊದಲು ಯಾರಿಗೂ ವಿಷ್ ಮಾಡಲ್ವಂತೆ ಧೋನಿ! ಚೆನ್ನೈ ತಂಡದ ನಾಯಕನ ಈ ನಡೆಗೆ ಕಾರಣವೇನು?