ಬಿಜೆಪಿ ಅಭ್ಯರ್ಥಿ ಲೋಕೇಶ ವಿ.ನಾಯಕ ನಾಮಪತ್ರ ತಿರಸ್ಕಾರಕ್ಕೆ ಆಗ್ರಹ

Hosapete Valmiki Community

ಹೊಸಪೇಟೆ: ಜಿಲ್ಲೆಯ ಕೂಡ್ಲಿಗಿ(ಎಸ್.ಟಿ. ಮೀಸಲು) ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕೇಶ ವಿ.ನಾಯಕ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ವಾಲ್ಮೀಕಿ ನಾಯಕ ಜಾಗೃತ ವೇದಿಕೆ, ಅವರ ನಾಮಪತ್ರ ತಿರಸ್ಕರಿಸಬೇಕು ಎಂದು ಒತ್ತಾಯಿಸಿದೆ.

ಕಮ್ಮವಾರಿ ನಾಯುಡು ಜನಾಂಗ

ವೇದಿಕೆ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾಗೆ ಗುರುವಾರ ಮನವಿ ಸಲ್ಲಿಸಿದರು. ಲೋಕೇಶ ವಿ.ನಾಯಕ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ ಕುಪ್ಪಂ ತಾಲೂಕಿನ ಮೋತಿಯಚಿ ಗ್ರಾಮದವರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಕಮ್ಮವಾರಿ ನಾಯುಡು ಜನಾಂಗದವರು. ಆದರೆ, ಅವರ ತಂದೆ ವೆಂಕಟಪತಿ, ತಾಯಿ ರೇಣಮ್ಮ ನಾಯುಡು ವಾಲ್ಮೀಕಿ ನಾಯಕ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ.

ಇದನ್ನೂ ಓದಿ: 47 ನಾಮಪತ್ರ ತಿರಸ್ಕೃತ, 486 ಕ್ರಮಬದ್ಧ

ಎಸ್ಟಿ ಜಾತಿ ಪ್ರಮಾಣ ಪತ್ರ ಆಧಾರದಲ್ಲಿ 2010ರಲ್ಲಿ ಬಿಬಿಎಂಪಿ ಸದಸ್ಯರಾಗಿದ್ದರು. ಈ ಮೂಲಕ ಸರ್ಕಾರಿ ಸೌಲಭ್ಯ ಮತ್ತು ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ತಕ್ಷಣವೇ ಗಮನ ಹರಿಸಿ, ಲೋಕೇಶ ನಾಯಕ ಅವರ ನಾಮ ಪತ್ರವನ್ನು ತಿರಸ್ಕರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಸಂಘಟನೆಯ ಪ್ರಮುಖರಾದ ಬೆಳ್ಗೋಡ್ ಅಂಬಣ್ಣ, ತಾರಿಹಳ್ಳಿ ಶಿವಪ್ಪ, ಶ್ರೀನಿವಾಸ ಅಂಚಿನ ಗುಡಿ, ಹೊಸಗೇರಿ ವೆಂಕಟೇಶ್, ಹಿರೇಭೀಮಪ್ಪ, ದುರ್ಗೇಶ್ ಮೂರ್ತಿ, ಪ್ರಶಾಂತ್ ನಾಯಕ, ರಘು ನಾಯಕ, ಲತಾ, ಲಕ್ಷ್ಮೀ, ಕಂಪ್ಲಿ ಕಣಿಮಪ್ಪ, ಗುಜ್ಜಲ ಕರಿಹನುಮಪ್ಪ, ನಿಂಗಣ್ಣ ನಾಯಕ, ರುದ್ರಪ್ಪ ಹಾಗೂ ಲಕ್ಷ್ಮಣ ನಾಯಕ ಇದ್ದರು.

Share This Article

ಇಲ್ಲಿ ಮಹಿಳೆಯರು ಬಿಕಿನಿ ಧರಿಸುವಂತಿಲ್ಲ; ಉಲ್ಲಂಘನೆ ಮಾಡಿದ್ರೆ ಆಗುತ್ತೆ ಕಠಿಣ ಶಿಕ್ಷೆ; ಎಲ್ಲಿ ಗೊತ್ತೆ? | Bikinis

Bikinis : ಸಾಮಾನ್ಯವಾಗಿ ಬೀಚ್​ಗಳಲ್ಲಿ ಯುವತಿಯರು ಸೇರಿದಂತೆ ಮಹಿಳೆಯರು ಬಿಕಿನಿ ಧರಿಸಿ ಓಡಾಡುತ್ತಾರೆ. ಅಲ್ಲದೆ, ನಮ್ಮದೆ…

ಚಿನ್ನದ ಆಭರಣಗಳನ್ನು ಧರಿಸುವುದರಿಂದ ಈ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ! Gold benefits

Gold benefits: ಹಬ್ಬವಾಗಲಿ ಅಥವಾ ಮದುವೆ ಸಮಾರಂಭವಾಗಲಿ ಮಹಿಳೆಯರು ಚಿನ್ನದ ಆಭರಣಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳುತ್ತಾರೆ. ಚಿನ್ನವು…

ಬೇಸಿಗೆಯಲ್ಲಿ ಕಲ್ಲಂಗಡಿ ತಿನ್ನುವಾಗ ಯಾವುದೇ ಕಾರಣಕ್ಕೂ ಈ ಮಿಸ್ಟೇಕ್​ ಮಾಡ್ಬೇಡಿ: ಮಾಡಿದ್ರೆ ಆರೋಗ್ಯಕ್ಕೆ ಅಪಾಯ! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…