More

    ಅಮಾಯಕನಂತೆ ಕಾಣುವ ಈತ ಲಂಚ ಕೇಳಿ ಲೋಕಾ ಬಲೆಗೆ ಬಿದ್ದ..!

    ದಾವಣಗೆರೆ: ನೋಡಿದರೆ ಅಷ್ಟೇನು ತಿಳಿದಿರದ ವ್ಯಕ್ತಿಯಂತೆ ಕಂಡರೂ ಈತ ಓರ್ವ ಸರ್ಕಾರಿ ಅಧಿಕಾರಿ. ಸರ್ವೇಯರ್​ ಆಗಿರುವ ಈತ, ಇ-ಪ್ರಾಪರ್ಟಿ ಮಾಡಿಕೊಡಲು ಲಂಚ ಕೇಳಿ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ.

    ಹರಳಹಳ್ಳಿಯ ದೇವೇಂದ್ರ ಗೌಡ ಎಂಬುವವರು, ಇ-ಪ್ರಾಪರ್ಟಿ ಮಾಡಿ ಕೊಡಿ ಎಂದು ಸರ್ವೇಯರ್​ ಆಗಿರುವ ಉದಯ್​ ಚೌಧರಿ ಬಳಿ ಬಂದಿದ್ದಾರೆ. ಆದರೆ ಈತ ಸರ್ಕಾರಿ ಕೆಲಸ ಮಾಡಿಕೊಡಲು ಮೂರು ಸಾವಿರ ಫೀಸ್​ ಕೇಳಿದ್ದಾನೆ. ಈ ಬಗ್ಗೆ ಖಚಿತ ಮಾಹಿತಿ ಲೋಕಾಯುಕ್ತರಿಗೆ ಲಭಿಸಿದೆ. ಆದರೆ ಲಂಚ ಪಡೆಯುವಾಗಲೇ ಈತನನ್ನು ಹಿಡಿಯಬೇಕು ಎಂದು ಸುಮ್ಮನಿದ್ದರು.

    ಉದಯ್​ ಚೌಧರಿ, ದಾವಣಗೆರೆ ಜಿಲ್ಲೆಯ ಹೊನ್ನಾಳಿ-ಶಿವಮೊಗ್ಗ ರಸ್ತೆಯಲ್ಲಿ ಲಂಚ ಪಡೆಯುವ ಪ್ಲಾನ್​ ಹಾಕಿಕೊಂಡಿದ್ದ. ಈ ವೇಳೆ, ಖಚಿತ ಮಾಹಿತಿ ಹೊಂದಿದ್ದ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ಅಷ್ಟಕ್ಕೂ ಈ ಭೂಪ, ಇ-ಪ್ರಾಪರ್ಟಿ ಮಾಡಿಕೊಡಲು ಬೇಡಿಕೆ ಇಟ್ಟದ್ದು 3 ಸಾವಿರ ರೂ. ಗೆ. ಈ ಸಂದರ್ಭ, ಲೋಕಾಯುಕ್ತ ಎಸ್ಪಿ ಎಂ ಎಸ್ ಕೌಲಾಪುರೆ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ರಾಷ್ಟ್ರಪತಿ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ. ಹೀಗೆ ಎಡಿಎಲ್ ಕಚೇರಿಯಲ್ಲಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದ ದಾವಣಗೆರೆಯ ಅವರಗೆರೆಯ ಉದಯ್ ಚೌಧರಿ, ಲೋಕಾ ಬಲೆಗೆ ಬಿದ್ದಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts