More

    ಲೋಕಾಪುರದಲ್ಲಿ ವೆಂಕಟೇಶ್ವರ ರಥೋತ್ಸವ

    ಲೋಕಾಪುರ: ನವರಾತ್ರಿ ಉತ್ಸವ ಅಂಗವಾಗಿ ಸ್ಥಳೀಯ ವೆಂಕಟೇಶ್ವರ ದೇವಸ್ಥಾನದಲ್ಲಿ ರಥೋತ್ಸವ ಸರಳವಾಗಿ ಜರುಗಿತು. ಭಕ್ತರು ತೆಂಗಿನಕಾಯಿ ಒಡೆದು, ಕರ್ಪೂರ-ಊದುಬತ್ತಿ ಬೆಳಗಿ ರಥಕ್ಕೆ ನಮಿಸಿ ವೆಂಕಟೇಶ್ವರ ದರ್ಶನ ಪಡೆದರು. ವಿಜಯದಶಮಿ ದಿನ ಸಂಜೆ ಮದ್ದು ಸುಡುವ ಕಾರ್ಯಕ್ರಮ ಜರುಗಿತು.

    ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಸ್ವಾಮೀಜಿ, ಮಲ್ಲಿಕಾರ್ಜುನ ದೇವಸ್ಥಾನದ ಅರ್ಚಕ ಮಹಾರುದ್ರಯ್ಯ ಮಠದ, ದೇವಸ್ಥಾನದ ಅರ್ಚಕ ಬಿ.ಎಲ್. ಬಬಲಾದಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

    ಪಂ.ಸುಶೀಲೆಂದ್ರಚಾರ್ಯ ಗೋಠೆ, ಸಿದ್ದರಾಮಪ್ಪ ದೇಸಾಯಿ, ಕಿರಣ ದೇಸಾಯಿ, ಆನಂದಚಾರ್ಯ ಜಂಬಗಿ, ಗುರುರಾಜ ಜೋಶಿ, ಲೋಕಣ್ಣ ಕೊಪ್ಪದ, ಲೋಕಣ್ಣ ಕತ್ತಿ, ಸಿ.ಎ. ಪಾಟೀಲ, ವಿ.ಎಂ. ತೆಗ್ಗಿ, ಕೆ.ಆರ್. ಬೋಳಿಶೆಟ್ಟಿ, ಯಮನಪ್ಪ ಹೊರಟ್ಟಿ, ಗುರುರಾಜ ಉದಪುಡಿ, ರಾಘವೇಂದ್ರಾಚಾರ್ಯ ಬಬಲಾದಿ, ಹನುಮಂತ ಕುಡಚಿ, ಸಂತೋಷ ದೇಶಪಾಂಡೆ, ರಂಗನಗೌಡ ಪಾಟೀಲ, ಬಾಬಾಸಾಹೇಬ ದೇಸಾಯಿ, ವಸಂತಗೌಡ ಪಾಟೀಲ, ಬಾಬಾಗೌಡ ಪಾಟೀಲ ಹಾಗೂ ಲಕ್ಷಾನಟ್ಟಿ, ಅರಳಿಕಟ್ಟಿ, ಜಾಲಿಕಟ್ಟಿ ಸೇರಿ ಸುತ್ತಮುತ್ತಲಿನ ಗ್ರಾಮದ ಭಕ್ತರು ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts