More

    ಯಂತ್ರದ ಮೂಲಕ ಭತ್ತ ನಾಟಿಗೆ ಚಾಲನೆ

    ಲಿಂಗಸುಗೂರು: ತಾಲೂಕಿನ ಆನೆಹೊಸೂರು ಗ್ರಾಮದ ರೈತ ಗೋಪಿರಡ್ಡಿ ಜಮೀನಿನಲ್ಲಿ ಯಂತ್ರದ ಮೂಲಕ ಭತ್ತ ನಾಟಿ ಮಾಡುವ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಹನುಮಂತ ಗುರುವಾರ ಚಾಲನೆ ನೀಡಿದರು.

    ನಂತರ ಅವರು ಮಾತನಾಡಿ, ರೈತರು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಅನೇಕ ಕೃಷಿ ಸಲಕರಣೆಗಳು ಲಭ್ಯವಿದ್ದು, ಹೆಚ್ಚುವರಿ ಇಳುವರಿ ಮತ್ತು ಆದಾಯ ಪಡೆಯಲು ಇವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಸಂಸ್ಥೆಯಿಂದ ತಾಲೂಕಿನಲ್ಲಿ ಸುಮಾರು 500 ಎಕರೆ ಪ್ರದೇಶದಲ್ಲಿ ಯಂತ್ರದ ಮೂಲಕ ಭತ್ತ ನಾಟಿ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಸಂಸ್ಥೆ ಮೇಲ್ವಿಚಾರಕ ಮಹ್ಮದ್ ಅಲಿ, ಪ್ರಬಂಧಕ ಪ್ರಭು ಹಿರೇಮಠ, ವಲಯ ಮೇಲ್ವಿಚಾರಕ ಪ್ರಭಾಕರ್, ಸೇವಾ ಪ್ರತಿನಿಧಿ ಕುಸುಮಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts