More

    ಹಿಂದು ಧರ್ಮ ಉಳಿಸಲು ಪಣತೊಡೋಣ

    ರಾಣೆಬೆನ್ನೂರ: ಹಿಂದುಗಳು ಜಾತಿ, ಪಕ್ಷದ ಹೆಸರಿನಲ್ಲಿ ಬೇರೆ ಬೇರೆ ಆಗುವ ಬದಲು ನಾನೊಬ್ಬ ಹಿಂದು ಎಂದು ಒಂದಾಗಬೇಕು. ಇಲ್ಲವಾದರೆ ಹುಬ್ಬಳ್ಳಿ, ಬೆಂಗಳೂರಿನ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅಡ್ಡಿ ಪಡಿಸುತ್ತಿರುವ ಮುಸ್ಲಿಮರು ಮುಂದೊಂದು ದಿನ ನಿಮ್ಮ ಮನೆಯಲ್ಲಿ ಪೂಜೆ ಮಾಡುವುದನ್ನು ತಡೆಯಲು ಮುಂದಾಗುವ ಸಾಧ್ಯತೆ ಇದೆ. ಆದ್ದರಿಂದ ಹಿಂದುಗಳಲ್ಲಿ ಜಾಗೃತಿ ಅನಿವಾರ್ಯ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.

    ಇಲ್ಲಿಯ ಮುನ್ಸಿಪಲ್ ಮೈದಾನದಲ್ಲಿ ಸ್ಥಳೀಯ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ವತಿಯಿಂದ 15ನೇ ವರ್ಷದ ಗಣೇಶೋತ್ಸವ ನಿಮಿತ್ತ ಬುಧವಾರ ಸಂಜೆ ಏರ್ಪಡಿಸಿದ್ದ ಹಿಂದು ಧಾರ್ವಿುಕ ಜಾಗೃತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

    ಪ್ರತಿಯೊಬ್ಬರೂ ಹಿಂದು ಧರ್ಮ ಪಾಲನೆ, ದೇಶದ ಸಂಸ್ಕೃತಿ ಉಳಿಸಲು ಪಣ ತೊಡಬೇಕು. ಸ್ವದೇಶಿ ವಸ್ತು ಖರೀದಿಸಬೇಕು. ಹಿಂದು ರಾಷ್ಟ್ರ ಉಳಿದರೆ ಮಾತ್ರ ನನ್ನ ಜಾತಿ, ಪಕ್ಷ, ಮನೆ, ಮಠ ಉಳಿಯುತ್ತದೆ ಎಂಬುದನ್ನು ಅರ್ಥೈಯಿಸಿಕೊಳ್ಳಬೇಕು. ಮುಸ್ಲಿಮರ ಓಲೈಕೆಗಾಗಿ ಅವರು ಹೇಳಿದಂತೆ ನಡೆದರೆ ಹಿಂದು ರಾಷ್ಟ್ರ ಉಳಿಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

    ಇಲ್ಲಿಯ ಬಿಜೆಪಿಯವರಿಗೆ ಅಧಿಕಾರ ಕಳೆದುಕೊಂಡಾಗ ಮಾತ್ರ ಹಿಂದುತ್ವ ನೆನಪಾಗುತ್ತಿದೆ. ಅಧಿಕಾರ ಬಂದ ಕೂಡಲೇ ಹಿಂದುತ್ವ, ಹಿಂದು ಕಾರ್ಯಕರ್ತರನ್ನು ಮರೆತು ಬಿಡುತ್ತಾರೆ. ಇಂಥವರನ್ನು ನಂಬಬೇಡಿ. 500 ವರ್ಷದ ಸಮಸ್ಯೆ ಬಗೆಹರಿಸಿ ಅಯೋಧ್ಯೆಯಲ್ಲಿಯೇ ರಾಮ ಮಂದಿರ ನಿರ್ಮಾಣ ಮಾಡಲು ನರೇಂದ್ರ ಮೋದಿಯವರೇ ಪ್ರಧಾನಿಯಾಗಿ ಬರಬೇಕಾಯಿತು ಎಂದರು.

    ಎಸ್​ಡಿಪಿಐ, ಪಿಎಫ್​ಐ ಸಂಘಟನೆಯವರು ನೂರು ವರ್ಷ ಹೋದರೂ ಸರಿ ಮತ್ತೆ ಅಯೋಧ್ಯೆಯಲ್ಲಿ ಬಾಬರ್ ಮಸೀದಿ ಕಟ್ಟುವುದಾಗಿ ಹೇಳುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ಶ್ರೀ ರಾಮ ಮಂದಿರದ ಒಂದು ಹುಲ್ಲು ಕಡ್ಡಿ ಅಲ್ಲಾಡಿಸಿ ತೋರಿಸಲಿ ಎಂದು ಸವಾಲು ಹಾಕಿದರು.

    ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ಮಾತನಾಡಿ, ದೇಶದ ಅನ್ನ ತಿಂದು ಸೈನಿಕರ ಮೇಲೆ ಹಾಗೂ ದೇವ, ದೇವತೆಗಳ ಮೇಲೆ ಅವಹೇಳನ ಮಾಡುತ್ತಿರುವ ಕೊಳಕು ಮನಸ್ಸುಗಳನ್ನು ಹೊರ ಹಾಕಬೇಕು ಎಂಬ ಉದ್ದೇಶದಿಂದ ಗಣೇಶೋತ್ಸವ ಆರಂಭಿಸಿದ್ದೇವೆ. ದೇಶ, ಹಿಂದುತ್ವ, ಸಂಸ್ಕಾರ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಮ್ಮಿಂದ ನಿರಂತರವಾಗಿರಲಿದೆ ಎಂದರು.

    ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಕೆಚ್ಚೆದೆಯ ಅಕ್ಕ ಅನು, ಶ್ರೀ ರಾಮ ಮಂದಿರದ ಕಲಾಕೃತಿ ಸಿದ್ಧಪಡಿಸಿದ ಕಲಾವಿದ ಇಂದ್ರಕುಮಾರ ಮತ್ತಿತರರು ಉಪಸ್ಥಿತರಿದ್ದರು.

    ಹಿಂದುತ್ವದ ತಾಕತ್ತು ಪ್ರದರ್ಶನ 15ರಂದು

    ಅ. 15ರಂದು ರಾಣೆಬೆನ್ನೂರ ಕಾ ರಾಜಾ ಗಣಪತಿಯ ಭವ್ಯ ಶೋಭಾಯಾತ್ರೆ ಹೊರಡಲಿದೆ. ಅದಕ್ಕಾಗಿ ರಾಣೆಬೆನ್ನೂರ ಸಂಪೂರ್ಣ ಕೇಸರಿಮಯವಾಗಿದೆ. ಲಕ್ಷಾಂತರ ಹಿಂದುಗಳ ನೇತೃತ್ವದಲ್ಲಿ ಶೋಭಾಯಾತ್ರೆ ನಡೆಯಲಿದೆ. ಅಂದು ಹಿಂದುತ್ವದ ತಾಕತ್ತು ಪ್ರದರ್ಶನ ಆಗಲಿದೆ. ಧರ್ಮ ಪಾಲನೆ ಮಾಡುವ ಯಾರೂ ಮದ್ಯ ಸೇವಿಸಿ ಬರಬೇಡಿ ಎಂದು ಪ್ರಮೋದ ಮುತಾಲಿಕ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts