ಶಿರಸಿ: ಬಾವಿಗೆ ಬಿದ್ದು ಚಿರತೆ ಮರಿ ಮೃತಪಟ್ಟ ಘಟನೆ ತಾಲೂಕಿನ ಸಾಲಕಣಿ ಸಮೀಪ ಭಾನುವಾರ ನಡೆದಿದೆ. ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಮರಿಯನ್ನು ಬಾವಿಯಿಂದ ಚೂಳಿಯ ಸಹಾಯದಿಂದ ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಡಿಎಫ್ಒ ಅಜ್ಜಯ್ಯ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬೇಟೆ ಹಿಡಿಯುವ ಬರದಲ್ಲಿ ಓಡಿ ಬಂದ ಚಿರತೆ ಬಾವಿ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಸಂಸದ ಅನಂತ ಕುಮಾರ್ ವಿರುದ್ಧ ಎಫ್ಐಆರ್