More

    ಸಾಧನೆಗೆ ಆತ್ಮವಿಶ್ವಾಸ ಮುಖ್ಯ

    ವಿಜಯವಾಣಿ ಸುದ್ದಿಜಾಲ ವಿಜಯಪುರ
    ಯುವಪೀಳಿಗೆ ದೊಡ್ಡ ಗುರಿ ಇಟ್ಟುಕೊಂಡು ಸಾಧಿಸಲೇಬೇಕೆಂಬ ಆತ್ಮವಿಶ್ವಾಸ, ಛಲದಿಂದ ಪ್ರಯತ್ನಿಸುವ ಗುಣ ಮೈಗೂಡಿಸಿಕೊಳ್ಳಬೇಕು. ಅದಕ್ಕೆ ಸೂಕ್ತ ಮಾರ್ಗದರ್ಶನ, ಹಿರಿಯರಿಂದ ಪ್ರೇರಣೆ, ಪ್ರೋತ್ಸಾಹದ ಅಗತ್ಯವಿದೆ ಎಂದು ಯೋಧ ನವೀನ್‌ನಾಗಪ್ಪ ತಿಳಿಸಿದರು.
    ಪಟ್ಟಣದ ರೋಟರಿ ಶಾಲಾ ಪ್ರಸಾದನಿಲಯದಲ್ಲಿ ರೋಟರಿ ವಿಜಯಪುರ, ಇನ್ನರ್‌ವೀಲ್ ಕ್ಲಬ್ ಆಫ್ ವಿಜಯಪುರದಿಂದ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಭಾರತೀಯ ಸೈನ್ಯದಲ್ಲಿರುವ ನೈತಿಕತೆ, ಮಾನವೀಯ ಮೌಲ್ಯಗಳು ಜಗತ್ತಿನ ಬೇರೆ ಯಾವುದೇ ದೇಶದ ಸೈನಿಕರಲ್ಲಿ ಕಾಣಸಿಗದು. ಯುವಪೀಳಿಗೆ ದೇಶಸೇವೆ, ಸೈನ್ಯಕ್ಕೆ ಸೇರುವ ಅವಕಾಶಗಳಿಂದ ತಪ್ಪಿಸಿಕೊಳ್ಳಬಾರದು ಎಂದರು.
    ಸೈನ್ಯಕ್ಕೆ ಸೇರಿದಾಗ ನೀಡುವ ತರಬೇತಿ ಆರಂಭದಲ್ಲಿ ಕಷ್ಟವೆನಿಸಿದರೂ ಅದು ಉದ್ದೇಶಪೂರ್ವಕವಾದದ್ದು. ಯುದ್ಧ ಸಂದರ್ಭದಲ್ಲಿ ತರಬೇತಿಯ ಅಂಶಗಳು ಮಾನಸಿಕ ಸಾಮರ್ಥ್ಯ ಸದೃಢಗೊಳಿಸುತ್ತವೆ ಎಂದರು.
    ಸೈನ್ಯಕ್ಕೆ ಸೇರಿ ತರಬೇತಿ, ನಂತರ ಸಲ್ಲಿಸಿದ ಸೇವೆಯ ವಿವರಗಳನ್ನು ವಿವರಿಸಿದರು. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ಸೈನ್ಯದೊಂದಿಗೆ ನಡೆದ ಯುದ್ಧದಲ್ಲಿ ಕ್ಷಣಗಳನ್ನು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts