More

    ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಿರಲಿ

    ಸಿರಗುಪ್ಪ: ಪ್ರತಿ ಹಬ್ಬವೂ ಸೌಹರ್ದದ ಪ್ರತೀಕ. ಹೀಗಾಗಿ ತಾಲೂಕಿನಲ್ಲಿ ಮೊಹರಂ ಅನ್ನು ಎಲ್ಲರೂ ಶಾಂತಿಯುತ, ಸಂಭ್ರಮದಿಂದ ಆಚರಿಸಬೇಕು ಎಂದು ಡಿವೈಎಸ್ಪಿ ವೆಂಕಟೇಶ್ ತಿಳಿಸಿದರು.

    ನಗರದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಮಾತನಾಡಿದರು. ಹಬ್ಬವನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಹಿಂದು-ಮುಸ್ಲಿಮರು ಭಾವೈಕ್ಯದಿಂದ ಆಚರಿಸುತ್ತಾರೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ತಾಲೂಕಿನ ಕೆಲ ಗ್ರಾಮಗಳಲ್ಲಿ ಮೊಹರಂ ಆಚರಣೆ ನಿಷೇಧ ಮಾಡಲಾಗಿದೆ.

    ಇದನ್ನೂ ಓದಿ:https://www.vijayavani.net/%

    ಎಲ್ಲ ಧರ್ಮಗಳಿಗಿಂತ ಮಿಗಿಲಾದದು ಮಾನವ ಧರ್ಮ. ಅದಕ್ಕೆ ಧಕ್ಕೆಯಾಗುವಂತಹ ಆಚರಣೆಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದರು. ಸಿಪಿಐ ಯಶವಂತ್ ಬಿಸ್ನಳ್ಳಿ, ಅಪರಾಧ ವಿಭಾಗದ ಪಿಎಸ್‌ಐ ವೀರನಗೌಡ, ಎಎಸ್‌ಐಗಳಾದ ಶ್ರೀನಿವಾಸ್, ವೆಂಕಟರಮಣ ಮತ್ತು ವಿವಿಧ ಗ್ರಾಮಗಳ ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts