More

    ಲಾವಣ್ಯ ಬೈಂದೂರು ರಿಧಂ ನೃತ್ಯ, ಕಲಾ ಶಾಲೆ ವಾರ್ಷಿಕೋತ್ಸವ

    ವಿಜಯವಾಣಿ ಸುದ್ದಿಜಾಲ ಬೈಂದೂರು

    ಕಲೆ ಒಂದು ವಿಶಾಲವಾದ ವಿಷಯ. ಎಲ್ಲ ಕಲೆಯ ಮೂಲ ಉದ್ದೇಶ ಆ ಕಲೆಯ ರಸೋತ್ಪಾದನೆ. ಕಲೆಯ ಅಭಿರುಚಿ ಎಲ್ಲರಲ್ಲೂ ಇರಬೇಕು. ಕಲೆ ಹೃದಯ ಸಂಸ್ಕಾರ ನೀಡುತ್ತದೆ, ಸಮಾಜವನ್ನು ಸುಸಂಸ್ಕೃತವನ್ನಾಗಿಸಲು ಮತ್ತು ಜ್ಞಾನ ಸಂಪಾದನೆಗೆ ಸಹಕಾರಿ ಎಂದು ನಿವೃತ್ತ ಮುಖ್ಯಶಿಕ್ಷಕ ಬಿಜೂರು ವಿಶ್ವೇಶ್ವರ ಅಡಿಗ ಹೇಳಿದರು.

    ಲಾವಣ್ಯ ಬೈಂದೂರು ಅಂಗ ಸಂಸ್ಥೆಯಾದ ರಿಧಂ ನೃತ್ಯ ಮತ್ತು ಕಲಾ ಶಾಲೆಯ 24ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ವೈಯಕ್ತಿಕ ವಿಚಾರ ಮೀರಿದ ಸಂಬಂಧವೇರ್ಪಡಿಸಿ ನಮ್ಮನ್ನು ಒಂದುಗೂಡಿಸುವ ಶಕ್ತಿ ಕಲೆ ಮತ್ತು ಸಾಹಿತ್ಯಕ್ಕಿದೆ. ತಾಯಿಯಂತಹ ಕರುಣೆ ಮತ್ತು ಮಗುವಿನಂತಹ ನಿಷ್ಕಪಟ ದೃಷ್ಟಿಯಿಂದ ನೋಡಿದರೆ ನಮಗೆ ಜಗತ್ತು ಸುಂದರ ಹಾಗೂ ಸನಿಹವಾಗುತ್ತದೆ. ಜಾತಿ, ಮತ, ಅಂತಸ್ತುಗಳ ನರಕದಿಂದ ಮೇಲೆತ್ತುವ ಸಾಮರ್ಥ್ಯ ಕಲೆಗಿದೆ ಎಂದರು.

    ಲಾವಣ್ಯ ಹಿರಿಯ ನಿರ್ದೇಶಕ ಬಿ.ಗಣೇಶ ಕಾರಂತ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಲಾವಿದ ಹರೇಗೋಡು ಉದಯ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಶಿರೂರು ಪ್ರಸಾದ ಪ್ರಭು, ಕುಂದಾಪುರ ವೆಂಕಟರಮಣ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸಂದೀಪ್ ಗಾಣಿಗ, ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರಾದ ಸವಿತಾ ದಿನೇಶ್, ಶಿಶುಮಂದಿರದ ಕಾರ್ಯದರ್ಶಿ ರಾಜೇಶ ಐತಾಳ್ ಉಪಸ್ಥಿತರಿದ್ದರು.
    ನೃತ್ಯಶಾಲಾ ವ್ಯವಸ್ಥಾಪಕ ಮೂರ್ತಿ ಡಿ. ಪ್ರಾರ್ಥಿಸಿದರು. ಸಂಸ್ಥೆ ಸಂಚಾಲಕ ಹಾಗೂ ನಿರ್ದೇಶಕ ನಾಗೇಂದ್ರ ಕುಮಾರ್ ಬಂಕೇಶ್ವರ್ ಸ್ವಾಗತಿಸಿ, ಶಿಕ್ಷಕ ಸುಬ್ರಹ್ಮಣ್ಯ ಜಿ. ಕಾರ್ಯಕ್ರಮ ನಿರ್ವಹಿಸಿದರು. ನಂತರ ರಿಧಂ ನೃತ್ಯ ಮತ್ತು ಕಲಾ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಮತ್ತು ಖ್ಯಾತ ಗಾಯಕರಿಂದ ಸಂಗೀತ ರಸಮಂಜರಿ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts