ಶ್ರೀನಗರ: ಮಧ್ಯ ಕಾಶ್ಮೀರದ ಗಂಡರ್ಬಲ್ ಜಿಲ್ಲೆಯ ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ಕಂಗನ್ನ ಬೋನಿಬಾಗ್ ಪ್ರದೇಶದಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಹಲವು ಮನೆಗಳು ಮತ್ತು ಅಂಗಡಿಗಳು ಹಾನಿಗೊಳಗಾಗಿವೆ.
ಭೂಕುಸಿತದಿಂದಾಗಿ ಶ್ರೀನಗರ-ಲೇಹ್ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ, ಇದು ಭಾರಿ ಭೂಕುಸಿತವಾಗಿದ್ದು, ಇದರಿಂದ ಹಲವಾರು ವಸತಿ ಮನೆಗಳು ಮತ್ತು ಅಂಗಡಿಗಳಳು ಹಾನಿಗೀಡಾಗಿವೆ ಎಂದು ಕಂಗನ್ ಉಪ ವಿಭಾಗೀಯ ಅಧಿಕಾರಿ ಹಕೀಮ್ ತನ್ವೀರ್ ಅಹ್ಮದ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಆದರೆ, ಈ ಪ್ರಕೃತಿ ವಿಕೋಪದಿಂದ ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿದ ವರದಿಯಾಗಿಲ್ಲ.