ಕನಕಗಿರಿ: ತಾಲೂಕಿನ ಲಾಯದುಣಸಿ ಗ್ರಾಮದಲ್ಲಿ ಶ್ರೀಲಕ್ಷ್ಮೀ ವೆಂಕಟೇಶ್ವರ ಜಾತ್ರಾ ಮಹೋತ್ಸವ ಗುರುವಾರ ಸಡಗರದಿಂದ ಜರುಗಿತು.
ಜಾತ್ರೆ ನಿಮಿತ್ತ ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜೆ, ಅರ್ಚನೆ ನಡೆಯಿತು. ಭಕ್ತರು ನೈವೇದ್ಯ ಹಾಗೂ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ಸಲ್ಲಿಸಿದರು. ಸಂಜೆ ನೂರಾರು ಭಕ್ತರ ಸಮ್ಮುಖದಲ್ಲಿ ಉಚ್ಛಾಯ ಜರುಗಿತು. ಭಕ್ತರು ಉತ್ತತಿ, ಬಾಳೆ ಹಣ್ಣು ಎಸೆದು ವೆಂಕಟರಮಣ ಗೋವಿಂದ ಗೋವಿಂದಾ…. ಎಂದು ನಾಮಸ್ಮರಣೆ ಮಾಡಿದರು.