ಶನಿವಾರ ಮಕರ ಸಂಕ್ರಮಣದು ಕರ್ಫ್ಯೂ ಹಿನ್ನೆಲೆಯಲ್ಲಿ ಯಾತ್ರಿಕರು ಮತ್ತು ಪ್ರವಾಸಿಗರಿಲ್ಲದೆ ಗೋಕರ್ಣ ಭಟಗುಡುವಂತಾಯಿತು. ಸಂಕ್ರಮಣದಂದು ಸಮುದ್ರದಲ್ಲಿ ಪುಣ್ಯ ಸ್ನಾನ ಮಾಡಿ ಸಂಕ್ರಾಂತಿ ಕರಿ ಕಳೆದುಕೊಳ್ಳಲು ಭಾರಿ ಸಂಖ್ಯೆಯಲ್ಲಿ ಭಕ್ತರು ಬರುವ ಪದ್ಧತಿಯಿತ್ತು. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಆಸ್ತಿಕರು ಇಲ್ಲಿಗೆ ಆಗಮಿಸುವ ಪರಿಪಾಠ ಬಹು ಹಿಂದಿನಂದ ಇತ್ತು. ಕರ್ಫ್ಯೂ ಕಾರಣದಿಂದ ಮಹಾಬಲೇಶ್ವರ ಮಂದಿರ ಸೇರಿ ಎಲ್ಲ ಮುಖ್ಯ ಮಂದಿರ ಮತ್ತು ಪ್ರಮುಖ ರಸ್ತೆಗಳು ಬರಿದಾಗಿದ್ದವು. ಈ ಭಾಗದಲ್ಲಿ ಶುಕ್ರವಾರದಂದು ಸಂಕ್ರಮಣ ಆಚರಿಸಲಾಗಿದ್ದು ಅಂಉ ಸಹ ಯಾವುದೇ ದಟ್ಟಣೆಯಿರಲಿಲ್ಲ.ರಸ್ತೆಯ ಮೇಲೆ ಜನರ ಸಾಮಾನ್ಯ ಓಡಾಟವಿತ್ತು.